Advertisement

Bengaluru: ಬೇಕರಿ ಮಾಲಿಕರ ಬೆದರಿಸಿ ಸುಲಿಗೆ ಮಾಡುತ್ತಿದ್ದ ಯುಟ್ಯೂಬರ್‌ ಬಂಧನ

01:12 PM Oct 11, 2024 | Team Udayavani |

ಬೆಂಗಳೂರು: ಪತ್ರಕರ್ತನ ಸೋಗಿನಲ್ಲಿ ಬೇಕರಿ ಮಾಲೀಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಯುಟ್ಯೂಬರ್‌ನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಶಫಿ ಬಂಧಿತ.

Advertisement

ಯುಟ್ಯೂಬರ್‌ ಆಗಿರುವ ಆರೋಪಿ, ನಗರದ ಹಲವು ಬೇಕರಿಗಳಿಗೆ ಹೋಗಿ ಸ್ವತ್ಛತೆಯಿಲ್ಲ, ನಿರ್ವಹಣೆ ಸರಿಯಿಲ್ಲ ಎಂದು ಮಾಲಿಕರನ್ನು ಬೆದರಿಸುತ್ತಿದ್ದ. ಏಕಾಏಕಿ ಬೇಕರಿಗಳ ಒಳ ನುಗ್ಗಿ ವಿಡಿಯೋ ಚಿತ್ರೀಕರಿಸಿಕೊಂಡು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿ ಪರವಾನಗಿ ರದ್ದು ಮಾಡಿಸುವುದಾಗಿ ಬ್ಲ್ಯಾಕ್‌ವೆುàಲ್‌ ಮಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಇತ್ತೀಚೆಗೆ ಹುಳಿಮಾವು ಬಳಿಯ ಅಕ್ಷಯನಗರದ ಬೇಕರಿಗಳ ಮಾಲಿಕರಿಗೆ ಬೆದರಿಕೆ ಹಾಕಿದ್ದ. ಯು-ಟ್ಯೂಬ್‌ ಚಾನಲ್‌ನ ಪತ್ರಕರ್ತ ಎಂದು ಹೇಳಿಕೊಂಡು ಬೇಕರಿ ಮಾಲಿಕರಿಂದ 10 ಸಾವಿರ ರೂ. ಸುಲಿಗೆ ಮಾಡಿದ್ದ. ಇದೇ ರೀತಿ ಮತ್ತೂಂದು ಬೇಕರಿಯ ಮಾಲಿಕರನ್ನು ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ್ದ. ಹಣ ಕೊಡಲು ನಿರಾಕರಿಸಿದ ಬೇಕರಿ ಮಾಲಿಕರು ಯುಟ್ಯೂಬರ್‌ ಶಫಿಯನ್ನು ಹಿಡಿದು ಠಾಣೆಗೆ ಮಾಹಿತಿ ನೀಡಿದರು. ಆಗ ಆರೋಪಿ, ನನಗೆ ಎಂಎಲ್ಎ ಗೊತ್ತು, ಸ್ಥಳೀಯ ರಾಜಕೀಯ ಮುಖಂಡರ ಪರಿಚಯ ಇದೆ ಎಂದೆಲ್ಲ ಧಮ್ಕಿ ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ. ‌

ಆರೋಪಿ ಇದೇ ರೀತಿ ಸುಮಾರು 50 ಬೇಕರಿ ಮಾಲಿಕರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಯಿಂದ ಮೊಬೈಲ್‌, ನಕಲಿ ಗುರುತಿನ ಚೀಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next