Advertisement

ದಲಿತ ಉದ್ಯೋಗಿಯನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಮೂವರ ವಿರುದ್ಧ ಕೇಸ್

02:31 PM Dec 21, 2021 | Team Udayavani |

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ದಲಿತ ಉದ್ಯೋಗಿಯೊಬ್ಬರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಸಚ್ಛತೆ ಮಾಡಿಸಿದ್ದಕ್ಕಾಗಿ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

Advertisement

ಆಸ್ಪತ್ರೆಯ ಹೌಸ್‌ಕೀಪಿಂಗ್ ಮೇಲ್ವಿಚಾರಕ ಡಿ. ರಾಜಾ, ಗಿಲ್ಬರ್ಟ್ ಮತ್ತು ನಿರ್ವಾಹಕರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ-1989 ಸೆಕ್ಷನ್ 3(1) (ಜೆ) ಮತ್ತು ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಸೆಕ್ಷನ್ 7,8,9 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ಸಮತಾ ಸೈನಿಕ ದಳ ಮತ್ತು 53 ವರ್ಷದ ಸಂತ್ರಸ್ತರ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ ಕೆ.ಎನ್ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಸಂತ್ರಸ್ತ ಖಾಯಂ ಉದ್ಯೋಗಿಯಾಗಿದ್ದು, 21 ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮ್ಯಾನ್‌ಹೋಲ್‌ಗೆ ಇಳಿಸಲು ಮತ್ತು ಒಳಚರಂಡಿ ಸ್ವಚ್ಛತೇ ಮಾಡುವಂತೆ ಕೇಳಲಾಗಿದ್ದು, ನಿರಾಕರಿಸಿದಾಗ, ಆರೋಪಿಗಳು ಸೇವೆಯಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.

ಮ್ಯಾನೇಜ್ ಮೆಂಟ್ ಕೂಡ ಈ ಕೆಲಸ ಮಾಡುವುದು ನಿನ್ನ ಕರ್ತವ್ಯ ಎಂದು ಹೇಳಿತ್ತು, ಅವರು ಅಪಾಯದಲ್ಲಿದ್ದರೂ ಮ್ಯಾನ್‌ಹೋಲ್‌ ಗೆ ಇಳಿಯಬೇಕಾಯಿತು , ನಂತರ ಸಮತಾ ಸೈನಿಕ ದಳವನ್ನು ಸಂಪರ್ಕಿಸಿ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next