Advertisement

Bengaluru: ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ: ಮ್ಯಾನೇಜರ್‌ ಬಂಧನ

02:57 PM Jan 05, 2024 | Team Udayavani |

ಬೆಂಗಳೂರು: ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪಿದಡಿ ಕಾಲ್‌ ಸೆಂಟರ್‌ ಕಂಪನಿಯೊಂದರ ಮ್ಯಾನೇಜರ್‌ನನ್ನು ಬಸವೇಶ್ವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೆ.ಆರ್‌.ಪುರ ನಿವಾಸಿ ಅಕ್ರಂ(40) ಬಂಧಿತ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಸವೇಶ್ವರನಗರದ ಕೃಷ್ಣ ಭವನ ಸಮೀಪದಲ್ಲಿರುವ ಕಾಲ್‌ ಸೆಂಟರ್‌ ಕಂಪನಿಯಲ್ಲಿ ಆರೋಪಿ ಅಕ್ರಂ ಮ್ಯಾನೇಜರ್‌ ಆಗಿದ್ದ. ಅದೇ ಕಂಪನಿಯಲ್ಲಿ ಸಂತ್ರಸ್ತೆ ಕೂಡ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಜ.2ರಂದು ಮನೆಗೆ ಔತಣ ಕೂಟಕ್ಕೆಂದು ಸಂತ್ರಸ್ತೆಯನ್ನು ಕರೆದೊಯ್ದ ಆರೋಪಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧ ನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next