Advertisement

Bengaluru-Mysuru expressway; ಇಂದು ಮತ್ತೆ ಅಪಘಾತ!

08:53 PM Aug 02, 2023 | Team Udayavani |

ರಾಮನಗರ : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್, ಆಟೋ,ಟ್ರ್ಯಾಕ್ಟರ್ ಗಳ ಸಂಚಾರಕ್ಕೆ ನಿರ್ಬಂಧ ಹೇರಿದರೂ ಅಪಘಾತ ಮುಂದುವರೆದಿದೆ. ಬುಧವಾರ(ಆ.2)ಚನ್ನಪಟ್ಟಣದ‌ ಬೈರಾಪಟ್ಟಣ ಬಳಿ ಲಾರಿಗೆ ಹಿಂಬಂದಿಯಿಂದ ಇನ್ನೋವಾ ಕಾರು ಗುದ್ದಿ ಅವಘಡ ಸಂಭವಿಸಿದೆ.

Advertisement

ಕಾರಿನ ಚಾಲಕ ಹಾಗೂ ವೃದ್ಧೆ ಗಂಭೀರವಾಗಿ ಗಾಯಗೊಂಡಿದ್ದಾರೆ.ಮಗು ಸೇರಿ ಕುಟುಂಬದ ಇತರ‌ ಸದಸ್ಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಅವಘಡ ನಡೆದಿದೆ ಎಂದು ವರದಿಯಾಗಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next