Advertisement

Bengaluru ಮರ್ಯಾದಾ ಹತ್ಯೆ: ಪುತ್ರಿಯನ್ನು ಮಾರಕಾಸ್ತ್ರದಿಂದ ಹೊಡೆದು ಕೊಂದ ತಂದೆ

11:32 PM Oct 22, 2023 | Team Udayavani |

ಬೆಂಗಳೂರು: ಪ್ರಿಯಕರನ ಜತೆ ಓಡಿ ಹೋಗಿದ್ದ ಪುತ್ರಿಯನ್ನು ತಂದೆಯೇ ಮಾರಕಾಸ್ತ್ರದಿಂದ ಕೊಚ್ಚಿ ಮರ್ಯಾದ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ನಡೆದಿದೆ.

Advertisement

ಮೈಸೂರಿನ ಎಚ್‌.ಡಿ. ಕೋಟೆ ಮೂಲದ ಪಲ್ಲವಿ (17) ಕೊಲೆಯಾದ ಯುವತಿ. ಕೃತ್ಯ ಎಸಗಿದ ಆಕೆಯ ತಂದೆ ಗಣೇಶ್‌ (50)ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಎಚ್‌.ಡಿ. ಕೋಟೆಯ ರೈತ ಗಣೇಶ್‌-ಶಾರದಮ್ಮ ದಂಪತಿ ಪುತ್ರಿ ಪಲ್ಲವಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಕಾಲೇಜಿನ ಮನೋಜ್‌ ಪರಿಚಯವಾಗಿ, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಗಣೇಶ್‌, ಪುತ್ರಿಗೆ ಬುದ್ಧಿವಾದ ಹೇಳಿದ್ದ. ಅಲ್ಲದೆ, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದ. ಅದರಿಂದ ಆತಂಕಗೊಂಡ ಪಲ್ಲವಿ, ಮನೋಜ್‌ ಜತೆ ಓಡಿ ಹೋಗಿದ್ದಳು. ಬಳಿಕ ಆಕೆಯನ್ನು ಸಂಬಂಧಿಕರ ಸಹಾಯದಿಂದ ಪತ್ತೆ ಹಚ್ಚಿ ಮನೆಗೆ ಕರೆತಂದು ವ್ಯಾಸಂಗ ಮೊಟಕುಗೊಳಿಸಿದ್ದರು. ಆದರೂ ಮನೋಜ್‌ನ ಸಂಪರ್ಕದಲ್ಲಿದ್ದ ಆಕೆ ಅ. 14ರಂದು ನಾಪತ್ತೆಯಾಗಿದ್ದು, ಪೊಲೀಸರು ಎರಡೇ ದಿನದಲ್ಲಿ ಪಲ್ಲವಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next