Advertisement

ಮುಂಬಾವನ್ನು ಉರುಳಿಸಿದ ಬುಲ್ಸ್‌

09:55 AM Sep 29, 2019 | keerthan |

ಜೈಪುರ: ಶುಕ್ರವಾರದ ಜೈಪುರ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಮಹತ್ವದ ಜಯ ಪಡೆದಿದೆ. ಈ ಜಯದ ಮೂಲಕ ಬೆಂಗಳೂರು ತಂಡದ ಪ್ಲೇ-ಆಫ್ ಸಾಧ್ಯತೆ ಹೆಚ್ಚಿದೆ.

Advertisement

ತೀವ್ರ ಪೈಪೋಟಿಯಿಂದ ಕೂಡಿದ ಈ ಹಣಾಹಣಿಯಲ್ಲಿ ಬೆಂಗಳೂರು ತಂಡ 35-33 ಅಂಕಗಳಿಂದ ಯು ಮುಂಬಾ ತಂಡವನ್ನು ಮಣಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಆತಿಥೇಯ ಜೈಪುರ ವಿರುದ್ಧ 51-31 ಅಂತರದ ಭರ್ಜರಿ ಜಯ ಸಾಧಿಸಿತು.

4ನೇ ಸ್ಥಾನದಲ್ಲಿ ಬುಲ್ಸ್‌
ಈ ಜಯದೊಂದಿಗೆ ಬೆಂಗಳೂರು ಬುಲ್ಸ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಒಟ್ಟು 19 ಪಂದ್ಯ ವಾಡಿರುವ ಬೆಂಗಳೂರು, 10 ಜಯ, 8 ಸೋಲು, 1 ಟೈನೊಂದಿಗೆ 58 ಅಂಕ ಗಳಿಸಿದೆ. ಬೆಂಗಳೂರಿಗೆ ಇನ್ನು 3 ಪಂದ್ಯ ಬಾಕಿ ಇದ್ದು, ಕನಿಷ್ಠ ಎರಡರಲ್ಲಿ ಗೆದ್ದರೆ ಪ್ಲೇ-ಆಫ್ ಖಾತ್ರಿಯಾಗಲಿದೆ.

ರೋಚಕ ಹಣಾಹಣಿ
ಎರಡೂ ತಂಡಗಳು ಆರಂಭದಿಂ ದಲೇ ಜಿದ್ದಾಜಿದ್ದಿ ಹೋರಾಟ ನಡೆಸಿ ದವು. ಕಡೆಯ 5 ನಿಮಿಷದಲ್ಲಿ ಬುಲ್ಸ್‌ ಮೇಲುಗೈ ಸಾಧಿಸಿ ಜಯ ಒಲಿಸಿಕೊಂಡಿತು. ಬುಲ್ಸ್‌ ಪರ ಪವನ್‌ ಸೆಹ್ರಾವತ್‌ ಮತ್ತೆ ಮಿಂಚಿದರು. 17 ಬಾರಿ ದಾಳಿ ನಡೆಸಿದ ಅವರು 10 ಅಂಕ ಗಳಿಸಿದರು. ತಂಡದ ರಕ್ಷಣಾ ವಿಭಾಗದಲ್ಲಿ ಮೆರೆದಿದ್ದು ಸೌರಭ್‌ ನಂದಲ್‌. ಅವರು 9 ಯತ್ನದಲ್ಲಿ 5 ಅಂಕ ಸಂಪಾದಿಸಿದರು. ಮುಂಬಾ ಪರ ಅಭಿಷೇಕ್‌ ಸಿಂಗ್‌ ದಾಳಿ ಉತ್ತಮ ಮಟ್ಟದಲ್ಲಿತ್ತು (10 ಅಂಕ). ಇದರೊಂದಿಗೆ ಜೈಪುರ ಚರಣ ಕೊನೆಗೊಂಡಿತು. ಶನಿವಾರದಿಂದ ಪಂಚಕುಲ ಆವೃತ್ತಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next