Advertisement

ಅನ್‌ಲಾಕ್‌ನಿಂದ ರಾಜಧಾನಿಯಲೀಗ್ಲಲವಲವಿಕ

10:20 AM Jul 06, 2021 | Team Udayavani |

ಬೆಂಗಳೂರು: ಕೋವಿಡ್‌ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ಬಹುತೇಕ ಹೋಟೆಲ್‌ಗ‌ಳಲ್ಲಿ ಜನರು ಕುಳಿತು ಉಪಹಾರ ಸೇವಿದರು. ಗ್ರಾಹಕರಿಲ್ಲದೆ ಸೊರಗಿದ್ದ ಚಿಕ್ಕಪೇಟೆ ಬಟ್ಟೆ ಅಂಗಡಿಗಳ ಗಲ್ಲಿಗಳಲ್ಲೂ ಜನರಿದ್ದರು. ಗಾರ್ಮೆಂಟ್‌, ಕೈಗಾರಿಕೆಗಳು ಅಧಿಕ ಸಂಖ್ಯೆಯ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಿದವು.ಹೀಗಾಗಿ ಎಲ್ಲ ಕಡೆಗಳಲ್ಲಿ ಲವಲವಿಕೆಯ ವಾತಾವರಣ ಕಂಡು ಬಂತು.

Advertisement

ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದ್ದ ಜನರು ಅನ್‌ಲಾಕ್‌ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತರ,ಕುಟುಂಬದವರ ಜತೆಗೆ ಹೋಟೆಲ್‌ಗ‌ಳಿಗೆ ಭೇಟಿ ನೀಡಿ ಕಾಫಿ, ಟೀ ಸವಿದರು. ಸುಮಾರು ಎರಡು ತಿಂಗಳು ಕಾಲ ಮನೆಯಲ್ಲೇ ಇದ್ದವರಿಗೆ ನಿರ್ಬಂಧ ಸಡಿಲಿಕೆ ಸ್ವಾತಂತ್ರ್ಯ ಸಿಕ್ಕಂತಾಗಿತ್ತು.

ಕೊರೊನಾ ಮಾರ್ಗ ಸೂಚಿಯಂತೆ ಹೋಟೆಲ್‌ಗ‌ಳು ಕಾರ್ಯನಿರ್ವಹಿಸಿದ್ದು, ಮಾಸ್ಕ್ಯಿಲ್ಲದೆ ಬರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಮಾಲೀಕರ ಸಂಘದ ಪಿ.ಸಿ. ರಾವ್‌,ಈಹಿಂದೆ ಜನತಾಕರ್ಫ್ಯೂವೇಳೆಪಾರ್ಸಲ್‌ ಸೇವೆನೀಡಿದ್ದ ಗ್ರಾಹಕರಿಗೆ ನೆರವಾಗಿದ್ದ ಹೋಟೆಲ್‌ಗ‌ಳು ಇದೀಗ ಪೂರ್ಣ ಪ್ರಮಾಣದ ಆತಿಥ್ಯ ನೀಡುತ್ತಿವೆ. ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ಚಿಕ್ಕಪೇಟೆಯಲ್ಲಿ ಜವಳಿ ವಹಿವಾಟು: ಹೋಲ್‌ಸೇಲ್‌ ಜವಳಿ ವ್ಯಾಪಾರಕ್ಕೆ ಹೆಸರಾಗಿರುವ ಚಿಕ್ಕಪೇಟೆಯಲ್ಲಿ ಕೋವಿಡ್‌ ಮಾರ್ಗ ಸೂಚಿಯಂತೆ ವ್ಯಾಪಾರ ಪ್ರಕ್ರಿಯೆ ಆರಂಭವಾಗಿದೆ.ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳಭಾಗಗಳಿಂದ ಬಟ್ಟೆ ಖರೀದಿ ದಾದರರು ಚಿಕ್ಕಪೇಟೆಯಿಂದಲೇ ಖರೀದಿ ಆರಂಭಿಸುತ್ತಾರೆ.

ಆದರೆ ಈಗ ಕೇರಳ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಇನ್ನೂ ಲಾಕ್‌ಡೌನ್‌ ತೆರವಾಗಿಲ್ಲ.ಆ ಹಿನ್ನೆಲೆಯಲ್ಲಿ ಇನ್ನೂ ಕೆಲವು ತಿಂಗಳು ಕಾಯುವುದು ಅನಿವಾರ್ಯ ಎಂದು ಬೆಂಗಳೂರು ಹೋಲ್‌ ಸೇಲ್‌ ಕ್ಲಾತ್‌ ಮರ್ಚೆಂಟ್‌ ಅಸೋಸಿ ಯೇಷನ್‌ ಅಧ್ಯಕ್ಷ ಪ್ರಕಾಶ ಪೀರ್ಗಲ್‌ ಹೇಳಿದ್ದಾರೆ.

Advertisement

ಕಾರ್ಮಿಕರು ವಾಪಸ್‌ ಬರಬೇಕಾಗಿದೆ: ಈ ಹಿಂದೆ ಸರ್ಕಾರ ಕೈಗಾರಿಕೆಗಳಲ್ಲಿ ಶೇ.50 ಕಾರ್ಮಿಕರು ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಶೇ.45ಕಾರ್ಮಿಕರುಕೆಲಸಕ್ಕೆ ಹಾಜರಾಗಿದ್ದರು. ಈಗ ಸಂಪೂರ್ಣ ವಿನಾಯ್ತಿ ನೀಡಿರುವ ಹಿನ್ನೆಲೆಯಲ್ಲಿಊರಿಗೆಹೋಗಿರುವಕಾರ್ಮಿಕರುಮತ್ತಷ್ಟು ಸಂಖ್ಯೆ ಯಲ್ಲಿ ಬರಬೇಕಾಗಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಸುಂದರ್‌ ಹೇಳಿದ್ದಾರೆ. ಎಂಜಿನಿಯರ್‌, ಆಟೋಮೊಬೈಲ್‌, ಗಾರ್ಮೆಂಟ್‌ನಲ್ಲಿ ಕಾರ್ಯನಿರ್ವಹಣೆ ಆರಂಭವಾಗಿದೆ. 3ನೇ ಅಲೆಯ ಭಯಕೈಗಾರಿಕಾ ವಲಯವನ್ನುಕಾಡುತ್ತಿದೆ.

ಅಲ್ಲದೆ ಆಭರಣ ಮಳಿಗೆಗಳು, ಪ್ಯಾನ್ಸಿ ಸ್ಟೋರ್‌ಗಳು, ಎಂಪೋರಿಯಂಗಳು, ಶೋ ರೂಂಗಳು,ಕಂಪ್ಯೂಟರ್‌ ಸೇರಿದಂತೆ ಉಪಕರಣ ಮಳಿಗೆಗಳು, ಪುಸ್ತಕದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಕೋವಿಡ್‌ ಮಾರ್ಗಸೂಚಿಯೊಂದಿಗೆಕಾರ್ಯಚಟುವಟಿಕೆ ಆರಂಭಿಸಿದ್ದು ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗಳ ಮುಂದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದು ಕಂಡು ಬಂತು.

 

ದೇಗುಲಗಳಲ್ಲಿ ದರ್ಶನಾವಕಾಶ:

ಕೋವಿಡ್‌ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಹಲವು ದೇವಾಲಯ, ಪ್ರಾರ್ಥನಾಮಂದಿರ ಮತ್ತು ಚರ್ಚೆಗಳಲ್ಲಿ ಭಕ್ತರು

ಕೋವಿಡ್‌ ಮಾರ್ಗ ಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಕೋವಿಡ್‌ನಿರ್ಬಂಧದ ಹಿನ್ನೆಲೆಯಲ್ಲಿ ಬಂದ್‌ಆಗಿದ್ದ ಬನಶಂಕರಿ ದೇವಾಲಯ, ಮಲ್ಲೇಶ್ವರದ ನರಸಿಂಹ ಸ್ವಾಮಿದೇವಾಲಯ ಮತ್ತು ತಿರುಮಲ ಗಿರಿ ದೇವಾಲಯ ಸೇರಿದಂತೆ ನಗರದ ದೇಗುಲಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಾಜಿನಗರ ಸೆಂಟ್‌ ಮೇರಿ ಚರ್ಚ್‌ನಲ್ಲಿ ಭಕ್ತರು ಪಾರ್ಥನೆ ನಡೆಸಿದರು. ಜತೆಗೆಕೆ.ಆರ್‌.ಮಾರುಕಟ್ಟೆಯ ಜಾಮೀಯಾ ಮಸೀದಿಯಲ್ಲಿ ಹಲವು ಸಂಖ್ಯೆಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸಿದರು.

ಹಲವುಕೈಗಾರಿಕೆಗಳುಕಾರ್ಯಾರಂಭ ಮಾಡಿವೆ. ಶೇ.60 ರಷ್ಟು ಮಾತ್ರ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ. ಇನ್ನೂ ಶೇ.40ರಷ್ಟು ಕಾರ್ಮಿಕರು ಕೆಲಸಕ್ಕೆ ಬರಬೇಕಾಗಿದೆ.ಕೆ.ಬಿ.ಅರಸಪ್ಪ, ಕಾಸಿಯಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next