Advertisement

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11:49 PM Sep 16, 2024 | Team Udayavani |

ಹಾಸನ: ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಸೋಮವಾರ ಬೆಳಗ್ಗೆ ಕಾಡಾನೆಯೊಂದು ಗ್ರಾಮದೊಳಗೆ ರಾಜಾರೋಷವಾಗಿ ಸಂಚರಿಸಿ ಭೀತಿ ಹುಟ್ಟಿಸಿತು. ಬಿಕ್ಕೋಡು ಸುತ್ತಮುತ್ತ ಕಾಡಾನೆಗಳು ಕುರಿಮಂದೆಯಂತೆ ಹಿಂಡು ಹಿಂಡಾಗಿ ಸಂಚರಿಸುತ್ತ ಬೆಳೆ ನಾಶಪಡಿಸುತ್ತಿವೆ.

Advertisement

ಬೆಳ್ಳಂಬೆಳಗ್ಗೆಯೇ ಗ್ರಾಮದೊಳಗೆ ಪ್ರವೇಶಿಸಿದ ಆನೆಯನ್ನು ಕಂಡು ಭಯಭೀತರಾದ ಗ್ರಾಮಸ್ಥರು ಮನೆಯೊಳಗೆ ಓಡಿ ಜೀವ ಉಳಿಸಿಕೊಂಡರು. ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಆನೆಗಳ ಹಿಂಡು ಭತ್ತ, ಅಡಿಕೆ, ಬಾಳೆ, ಕಾಫಿ, ಮೆಕ್ಕೆಜೋಳದ ಬೆಳೆಗಳ ನಡುವೆ ಮನಸೋ ಇಚ್ಛೆ ಓಡಾಡುತ್ತ ನಾಶಪಡಿಸುತ್ತಿವೆ. ಅರಣ್ಯ ಇಲಾಖೆಯ ಇಟಿಎಫ್ ಸಿಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಧ್ವನಿವರ್ಧಕದ ಮೂಲಕ ಗ್ರಾಮಸ್ಥರು ಹಾಗೂ ಇತರರಿಗೆ ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next