Advertisement

ಬೆಳ್ತಂಗಡಿ: ಆತಂಕ ಮೂಡಿಸಿದ ಸೋಮವಾರ ಸಂತೆ

10:15 PM Apr 13, 2020 | Sriram |

ಬೆಳ್ತಂಗಡಿ: ಲಾಕ್‌ಡೌನ್‌ ನಿಂದಾಗಿ ವಾರದ ಸಂತೆಯನ್ನು ನಡೆಸದಂತೆ ನ.ಪಂ. ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸೋಮವಾರ ಸಂತೆ ನಡೆದಿದ್ದು, ಜನ ಸಂದಣಿಯೂ ವಿಪರೀತವಾಗಿತ್ತು.

Advertisement

ಎ.13ರಂದು ಬೆಳ್ತಂಗಡಿಯ ಸೋಮ ವಾರ ಸಂತೆಗೆ ಬೆಳ್ಳಂಬೆಳಗ್ಗೆಯೇ ಜಾತ್ರೆ ಯಂತೆ ಜನ ಸೇರಿದ್ದರು. ಕೆಲವು ದಿನಗಳ ಹಿಂದೆ ಪೊಲೀಸ್‌ ಇಲಾಖೆ ಸಿಕ್ಕಸಿಕ್ಕ ವಾಹನಗಳಿಗೆ ದಂಡ ವಿಧಿಸಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ತರಕಾರಿ, ತಳ್ಳುಗಾಡಿ ಸಹಿತ ಹಣ್ಣು ಹಂಪಲು, ಒಣಮೀನು, ಹಸಿಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಜನ ಸಾಲುಗಟ್ಟಿ ಖರೀದಿಸಿದರು. ಜತೆಯಲ್ಲಿ ಪೇಟೆಯಲ್ಲಿ ಸೆಲೂನ್‌, ಫ್ಯಾನ್ಸಿ ಸಹಿತ ಬಹುತೇಕ ವ್ಯಾಪಾರ ಸಂಸ್ಥೆಗಳು ತೆರೆಯ ಲಾರಂಭಿಸಿವೆೆ. ಹೆಚ್ಚಿನ ವ್ಯಾಪಾರಿಗಳು ಮಾಸ್ಕ್, ಸ್ಯಾನಿಟೈಸರ್‌ ಬಳಸದೆ ವ್ಯಾಪಾರ ದಲ್ಲಿ ನಿರತರಾಗಿದ್ದಾರೆ.

ಸೋಮವಾರ ಬೆಳ್ತಂಗಡಿ ಪೇಟೆಯಲ್ಲಿ ಪ್ರಮುಖ ಖಾಸಗಿ ಬ್ಯಾಂಕ್‌ಗಳ ಎದುರು ರಸ್ತೆವರೆಗೆ ಕ್ಯೂ ನಿಂತಿತ್ತು. ಕ್ಯಾಂಪ್ಕೋ ಹಾಗೂ ಎಪಿಎಂಸಿ ತೆರೆದಿದ್ದ ಕಾರಣ ಕೃಷಿಕರು ಬ್ಯಾಂಕ್‌ ವ್ಯವಹಾರ ಅವಲಂಬಿಸಿದ್ದುದು ಕೂಡ ಇದಕ್ಕೆ ಪ್ರಮುಖ ಕಾರಣವಾಗಿತ್ತು.

 ಅನುಮತಿ ಇಲ್ಲ
ವಾರದ ಸಂತೆ ನಡೆಸಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ. ಹಣ್ಣು ಹಂಪಲು, ತರಕಾರಿ ಮಾರಾಟಕ್ಕಷ್ಟೇ ಅವಕಾಶವಿದೆ. ಇತರ ಅಂಗಡಿಗಳನ್ನು ಮುಂದಿನ ದಿನಗಳಲ್ಲಿ ಪೊಲೀಸರ ಸಹಕಾರದಲ್ಲಿ ನಾವೇ ಸೀಲ್‌ಡೌನ್‌ ಮಾಡುತ್ತೇವೆ. ಗ್ರಾಹಕರು ಅಂತರ ಕಾಯ್ದುಕೊಳ್ಳುವಂತೆ ವ್ಯಾಪಾರಿಗಳೂ ಮುಂಜಾಗ್ರತೆ ವಹಿಸಬೇಕು.
ಸುಧಾಕರ‌ ಎಂ.ಎಚ್‌.,
ನ.ಪಂ. ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next