Advertisement

Belthangady: ತುಂಡಾಗಿ ಬಿದ್ದ ಎಚ್‌ಟಿ ವಿದ್ಯುತ್‌ ತಂತಿ: ಸಕಾಲಿಕ ಸ್ಪಂದನೆ, ತಪ್ಪಿದ ಅನಾಹುತ

11:35 PM Aug 26, 2024 | |

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಡಂಬಳ್ಳಿ ಎಂಬಲ್ಲಿ ಎಚ್‌ಟಿ ಲೈನ್‌ ವಿದ್ಯುತ್‌ ತಂತಿ ಕಡಿದು ಬಿದ್ದು ಮೆಸ್ಕಾಂನ ಸಕಾಲಿಕ ಸ್ಪಂದನೆಯಿಂದ ಸಂಭವನೀಯ ಅನಾಹುತ ತಪ್ಪಿದೆ.

Advertisement

ಕಡಂಬಳ್ಳಿಯ ತಂಬೂರಿ ಪದ್ಮನಾಭ ಪಟವರ್ಧನ್‌ ಅವರ ರಬ್ಬರ್‌ ತೋಟದಲ್ಲಿ ಹಾದು ಹೋಗಿರುವ ಎಚ್‌ಟಿ ಲೈನ್‌ ವಿದ್ಯುತ್‌ ತಂತಿ ಸೋಮವಾರ ಮುಂಜಾನೆ 4ರ ಸುಮಾರಿಗೆ ಕಡಿದು ಬಿದ್ದು ತೋಟದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಮನೆಯವರು ತತ್‌ಕ್ಷಣ ಪರಿಸರದ ಮಂದಿ ಹಾಗೂ ಮೆಸ್ಕಾಂ ಜೆಇಯವರಿಗೆ ಫೋನ್‌ ಮೂಲಕ ವಿಚಾರ ತಿಳಿಸಿದ್ದಾರೆ.

ಕೂಡಲೇ ಕಕ್ಕಿಂಜೆ ಸಬ್‌ ಸ್ಟೇಷನ್‌ ನಿಂದ ವಿದ್ಯುತ್‌ ಲೈನ್‌ ಆಫ್‌ ಮಾಡಿದ ಕಾರಣ ಹಾಗೂ ಮಳೆ ಇದ್ದುದರಿಂದ ಬೆಂಕಿ ಹತೋಟಿಗೆ ಬಂದಿದೆ. ಇಲ್ಲವಾದಲ್ಲಿ ರಬ್ಬರ್‌ ತೋಟ ಬೆಂಕಿಗೆ ಆಹುತಿಯಾಗುವ ಸಾಧ್ಯತೆಯಿತ್ತು. ಕಡಂಬಳ್ಳಿ ಮತ್ತು ಕುಡೆಂಚಿ ಪರಿಸರದಲ್ಲಿ ಹಳೇ ತಂತಿಗಳಿದ್ದು, ಅವುಗಳನ್ನು ಬದಲಾಯಿಸಲಾಗಿಲ್ಲ. ತಂತಿ ಬದಲಾವಣೆ ಬಗ್ಗೆ ಸಾಕಷ್ಟು ಬಾರಿ ಮೆಸ್ಕಾಂನ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next