Advertisement

Belthangady ಮನೆಗೆ ಅಕ್ರಮ ಪ್ರವೇಶಿಸಿ ಹಲ್ಲೆಗೆ ಯತ್ನ, ದೂರು ದಾಖಲು

08:41 PM Mar 26, 2024 | Team Udayavani |

ಬೆಳ್ತಂಗಡಿ: ಮಗ ಮತ್ತು ಸೊಸೆ ಮಹಿಳೆಯೋರ್ವರಿಗೆ ಹಲ್ಲೆ ನಡೆಸಲು ಮುಂದಾಗಿ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಈ ಬಗ್ಗೆ ಬಡಗಕಾರಂದೂರು ನಿವಾಸಿ ಸಿಸಿಲಾ ವೇಗಸ್‌ (79) ವೇಣೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಮಾ. 15ರಂದು ಮಗ ಸವೇರ ಪಿರೇರ ದೊಣ್ಣೆ ಹಿಡಿದು ಮನೆ ಗೇಟಿನ ಹೊರಗಡೆ ನಿಂತುಕೊಂಡಿದ್ದು, ಆತನ ಪತ್ನಿ ಶಾಂತಿ ಗ್ರೇಟಾ ಪಿರೇರಾಳು ಕಲ್ಲನ್ನು ಹಿಡಿದುಕೊಂಡು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನಿಂದ ಹೊಡೆಯಲು ಯತ್ನಿಸಿ ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ಹೇಳಲಾಗಿದೆ.

ಮಾ. 26ರಂದು ಕೂಡ ಮಗ ಸವೇರ ಪಿರೇರ ಮನೆಯ ಬೇಲಿಯ ಸುತ್ತಲು ತಿರುಗಾಡುತ್ತಿದ್ದು, ಇದರಿಂದ ಮಹಿಳೆ ಹಾಗೂ ಅವರ ಗಂಡನಿಗೆ ಪ್ರಾಣ ಭಯ ಉಂಟಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next