Advertisement

Belthangady ಮಾಜಿ ಶಾಸಕ ವಸಂತ ಬಂಗೇರ ಅವಹೇಳನ ವಿರುದ್ಧ ಕ್ರಮಕ್ಕೆ ದೂರು

08:24 PM Oct 21, 2023 | Team Udayavani |

ಬೆಳ್ತಂಗಡಿ: ಮಾಜಿ ಶಾಸಕ ಕೆ.ವಸಂತ ಬಂಗೇರರ ಬಗ್ಗೆ ಅ. 15ರಂದು ಕಾರ್ಕಳದಲ್ಲಿ ನಡೆದ ಧರ್ಮ ಸಂರಕ್ಷಣ ಸಭೆಯಲ್ಲಿ ಸಾರ್ವಜನಿಕವಾಗಿ ಅಪಹಾಸ್ಯ ಮಾಡಿರುವ ಖಾಸಗಿ ಟಿ.ವಿ. ಮಾಲಕ ರಾಕೇಶ್‌ ಶೆಟ್ಟಿಯ ಮಾತನ್ನು ಖಂಡಿಸಿ ಬಂಗೇರ ಅಭಿಮಾನಿಗಳ ವತಿಯಿಂದ ಅ. 20ರಂದು ಸಮಾಲೋಚನ ಸಭೆ ನಡೆಯಿತು.

Advertisement

ಈ ಸಭೆಯಲ್ಲಿ ರಾಕೇಶ್‌ ಶೆಟ್ಟಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು. ಜತೆಗೆ ಅ. 26 ಅಥವಾ 27ರಂದು ಅವರ ವಿರುದ್ಧ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಆಬಳಿಕ ರಾಕೇಶ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ ಅವರಿಗೆ ದೂರು ನೀಡಲಾಯಿತು. ಈ ವೇಳೆ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗೇಶ್‌ ಕುಮಾರ್‌, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಕಾಶಿಪಟ್ಣ ಸಹಿತ ಪ್ರಮುಖರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next