Advertisement

ಬೆಳ್ತಂಗಡಿ: ಅಂಧ‌ ಕುಟುಂಬಕ್ಕೆ ವಿದ್ಯುತ್‌ ಬೆಳಕು

11:37 PM May 18, 2020 | Sriram |

ಬೆಳ್ತಂಗಡಿ: ಬಡತನದಿಂದ ಜೀವನ ಸಾಗಿಸುತ್ತಿರುವ ವೃದ್ಧೆಯೋರ್ವರ ಮನೆಗೆ ಧರ್ಮಸ್ಥಳ ಗ್ರಾ.ಪಂ. ತುರ್ತು ವಿದ್ಯುತ್‌ ಸಂಪರ್ಕ ಒದಗಿಸುವ ಕಾರ್ಯ ಮಾಡಿದೆ.

Advertisement

ತಾಲೂಕಿನ ಧರ್ಮಸ್ಥಳದ ನಾರ್ಯ ನಿವಾಸಿ ಕಮಲಾ ಮೊಗೇರ ಎಂಬುವರಿಗೆ ಓರ್ವ ಹೆಣ್ಣು ಮಗಳು ಸಹಿತ ಮೂವರು ಮಕ್ಕಳು. ಆದರೆ ಜಗತ್ತಿನ ಬೆಳಕು ಕಾಣಬೇಕಿದ್ದು ಮಕ್ಕಳು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಪತಿ ಹಾಗೂ ಒಬ್ಬ ಮಗ ಈಗಾಗಲೇ ನಿಧನ ಹೊಂದಿದ್ದು, ಮನೆಗೆ 8 ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಬದುಕಿಗೆ ಕತ್ತಲು ಆವರಿಸಿತ್ತು.

ಈ ವಿಚಾರವಾಗಿ ಪಂಚಾಯತ್‌ ಹಾಗೂ ಮೆಸ್ಕಾಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಇದನ್ನು ಅರಿತ ಸ್ಥಳೀಯ ನಿವಾಸಿಗಳಾದ ನಿಶಾನ್‌ ಬಂಗೇರ ಹಾಗೂ ಸತೀಶ್‌, ಗ್ರಾ.ಪಂ. ಸದಸ್ಯ ಸುಧಾಕರ್‌ ಗೌಡ ಅವರ ಗಮನಕ್ಕೆ ತಂದಿದ್ದರು. ತತ್‌ಕ್ಷಣ ಸ್ಪಂದಿಸಿದ ಸುಧಾಕರ್‌ ಮನೆಗೆ ಭೇಟಿ ನೀಡಿ ಪಂಚಾಯತ್‌ ಮುಖಾಂತರ ಒಂದೇ ದಿನದಲ್ಲಿ ವಿದ್ಯುತ್‌ ಸಂಪರ್ಕ ಸಹಿತ ನಳ್ಳಿ ನೀರಿನ ಸಂಪರ್ಕದ ಜತೆಗೆ ಒಂದು 1 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next