Advertisement

ಬರಾಯ ಕನ್ಯಾಡಿಯಲ್ಲಿ ನಿಧಿ ವದಂತಿ! ಸ್ಥಳಕ್ಕೆ ತಹಶೀಲ್ದಾರ್, ಪೊಲೀಸರು ದೌಡು

05:48 PM Jul 22, 2020 | sudhir |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಡ ಗ್ರಾ.ಪಂ. ವ್ಯಾಪ್ತಿಯ ಬರಾಯ ಕನ್ಯಾಡಿ ಗ್ರಾಮದ ಪಣೆತ್ತಡಿ ಆನಂದ ಶೆಟ್ಟಿ ಎಂಬವರ ಜಮೀನಿನಲ್ಲಿ ನಿಧಿ ಲಭಿಸಿರುವ ಬಗ್ಗೆ ವದಂತಿ‌ ಸೃಷ್ಟಿಯಾಗಿದೆ.

Advertisement

ಒಂದು ತಿಂಗಳ ಹಿಂದೆ ಆನಂದ ಶೆಟ್ಟಿ ಅವರಿಗೆ ನಿಧಿ ಲಭಿಸಿತ್ತು ಇದೀಗ ಅವರು ನಿಧಿ ಸಿಕ್ಕಿದ ಜಾಗವನ್ನು ಸಮತಟ್ಟು ಮಾಡಿದ್ದಾರೆ ಎಂದು ಯಾರೋ ಸ್ಥಳೀಯರು ವಿಡಿಯೋ ಮಾಡಿ ಎಸಿ ಯವರಿಗೆ ಕಳುಹಿಸಿದ್ದಾರೆ.

ಇದೀಗ ತಹಶೀಲ್ದಾರ್ ಸಮ್ಮುಖದಲ್ಲಿ ಬುಧವಾರ ನಿಧಿ ಶೋಧಕ್ಕೆ‌ ಸಿದ್ಧತೆಗಳು ನಡೆಯುತ್ತಿದ್ದು ಬೆಳ್ತಂಗಡಿ ಎಸ್.ಐ. ನಂದಕುಮಾರ್, ನಡ ಗ್ರಾ.ಪಂ. ಗ್ರಾಮ ಲೆಕ್ಕಿಗ ಅಧಿಕಾರಿಗಳು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಸ್ಥಳದಲ್ಲಿ ತಾಳೆಮರವಿದ್ದು, ಅದನ್ನು ತೆರವುಗೊಳಿಸುವಾಗ ಮಣ್ಣು ಕುಸಿತಗೊಂಡಿದ್ದು ಯಾವುದೇ ನಿಧಿ ಇಲ್ಲ ಎಂದು ಜಮೀನಿನ ಯಜಮಾನ ಆನಂದ ಶೆಟ್ಟಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

ತಹಶೀಲ್ದಾರ್‌ ಮಹೇಶ್ ಜೆ. ಸಮ್ಮುಖದಲ್ಲಿ‌ ನಿಧಿ ಶೋಧಕ್ಕೆ‌ ಕಾರ್ಯಕ್ಕೆ ಮುಂದಾಗಿದ್ದು ಸತ್ಯಾಂಶ ಇನ್ನಷ್ಟೆ ಹೊರಬರಬೇಕಿದೆ. ಸ್ಥಳದಲ್ಲಿ ಹತ್ತಾರು ಜನ ನಿಧಿ ಶೋಧ ನೋಡಲು ಜಮಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next