Advertisement

Beltangady: ರಾಷ್ಟ್ರೀಯ ಹೆದ್ದಾರಿ ಬದಿ ಬೆಂಕಿ…ತಪ್ಪಿದ ಹೆಚ್ಚಿನ ಅನಾಹುತ

09:08 PM Apr 24, 2023 | Team Udayavani |

ಬೆಳ್ತಂಗಡಿ: ಮುಂಡಾಜೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕಾಪು ಬಳಿ ವಿದ್ಯುತ್‌ ಲೈನ್‌ನಿಂದ ಕಿಡಿಗಳು ಹಾರಿದ ಪರಿಣಾಮ ಬೆಂಕಿ ಹರಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ಅರಣ್ಯ ಇಲಾಖೆಯ ಕಾಪು ಸಸ್ಯ ಕ್ಷೇತ್ರದ ಸಮೀಪವೇ ಬೆಂಕಿ ಅವಘಡ ನಡೆದಿದೆ. ಸಮಾಜ ಸೇವಕ ಸಚಿನ್‌ ಭಿಡೆ ಹಾಗೂ ಸಸ್ಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರು ತಕ್ಷಣ ಕಾರ್ಯಪ್ರವರ್ತರಾಗಿ ಬೆಂಕಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಬೆಂಕಿ ಆರಿಸಲು ತಡವಾಗುತ್ತಿದ್ದರೆ ಸಸ್ಯಕ್ಷೇತ್ರದ ಒಳಗೂ ನುಗ್ಗಿ ಮಳೆಗಾಲದ ವಿತರಣೆಗೆ ಸಿದ್ಧವಾಗುತ್ತಿರುವ ನಾನಾ ಜಾತಿಯ ಹಲವು ಸಾವಿರ ಗಿಡಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next