Advertisement

ಬೆಳ್ಮಣ್‌: ಒಂದೇ ದಿನದಲ್ಲಿ ನಾಲ್ಕು ಎಕ್ರೆ ಗದ್ದೆ ನಾಟಿ

11:07 PM Jun 19, 2019 | Team Udayavani |

ಬೆಳ್ಮಣ್‌: ಒಂದೇ ದಿನದಲ್ಲಿ 4 ಎಕರೆ ಕೃಷಿ ಭೂಮಿಯನ್ನು ನಾಟಿ ಮಾಡಿ ಗಂಗಾವತಿ ಮೂಲದ 22 ಕೃಷಿ ಮಹಿಳಾ ಕಾರ್ಮಿಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

Advertisement

ಸಂಕಲಕರಿಯದ ಸುಧಾಕರ ಸಾಲ್ಯಾನ್‌ ಅವರ ಗದ್ದೆಯಲ್ಲಿ ಮಹಿಳೆಯರು 4 ಎಕರೆಗೆ ಬೇಕಾಗುವಷ್ಟು ನೇಜಿ ಕಿತ್ತು ಬಳಿಕ ಸಂಜೆಯೊಳಗೆ ನಾಟಿ ಮುಗಿಸಿದ್ದಾರೆ.

ಗಂಗಾವತಿ ಮೂಲದ 50 ಮಂದಿಯ ಕೃಷಿ ಕಾರ್ಮಿಕ ತಂಡವೊಂದನ್ನು ಶಿವಮೊಗ್ಗ ಮೂಲದ ಮಾಲತೇಶ್‌ ಎಂಬವರು ಗುತ್ತಿಗೆ ಆಧಾರದಲ್ಲಿ ಕೃಷಿ ಜಮೀನಿನಲ್ಲಿ ಕೆಲಸ ಮಾಡಿಕೊಡುತ್ತಾರೆ. ಇವರಿಗೆ ಎಕರೆಗೆ 4 ಸಾವಿರ ರೂ. ದರವಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ನಲುಗಿ ಹೋಗಿದ್ದ ಈ ಭಾಗದ ಕೃಷಿ ಕೇತ್ರಕ್ಕೆ ಇವರಿಂದಾಗಿ ತುಸು ಚೇತರಿಕೆ ಬಂದಿದೆ.

ಊರಿನಲ್ಲಿ ನೀರಿಲ್ಲ, 120 ರೂ. ಸಂಬಳ
ಗಂಗಾವತಿಯಲ್ಲಿ ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇದ್ದು, ಆದ್ದರಿಂದ ಕೆಲಸ ಹುಡುಕಿಕೊಂಡು ಅವರು ಕರಾವಳಿಗೆ ಬಂದಿದ್ದಾರೆ. ಊರಿನಲ್ಲಿ ಸಿಗುವ 120 ರೂ. ಸಂಬಳ ಏನೇನೂ ಸಾಲದು. ಆದ್ದರಿಂದ ಇಲ್ಲೇ ಕೆಲಸ ಕಂಡುಕೊಂಡಿದ್ದಾರೆ. ಇವರು ಬೆಳಗ್ಗೆ 8 ಗಂಟೆಗೆ ನಾಟಿ ಕೆಲಸ ಆರಂಭಿಸಿದರೆ, ಮುಗಿಯುವ ವರೆಗೂ ವಿರಮಿಸುವುದಿಲ್ಲ. ಆಹಾರದ ವ್ಯವಸ್ಥೆಯನ್ನು ಇವರೇ ನಿಭಾಯಿಸುತ್ತಾರೆ. ತಂಡದಲ್ಲಿ ಕೆಲ ಮಂದಿ ಪುರುಷರೂ ಇದ್ದು ಭಾರೀ ಚುರುಕಿನಲ್ಲಿ ದುಡಿಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next