Advertisement

ಬೆಳ್ಮಣ್ಣು: ಆಮ್ನಿಯಲ್ಲಿ ಮದ್ಯ, ಬಿಯರ್‌ ಸಾಗಾಟ ಪತ್ತೆ, ಬಂಧನ

07:20 AM Jul 24, 2017 | Team Udayavani |

ಉಡುಪಿ: ಮಾರಾಟ ಮಾಡುವ ಸಲುವಾಗಿ ಮಾರುತಿ ಆಮ್ನಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಹಾಗೂ ಬಿಯರ್‌ ಅನ್ನು ಸಾಗಿಸುತ್ತಿದ್ದುದನ್ನು ಅಬಕಾರಿ ಇಲಾಖೆ ಪೊಲೀಸರು ಪತ್ತೆ ಮಾಡಿದ್ದು, ಸೊತ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

Advertisement

ಜು. 22ರ ಮುಂಜಾನೆ ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದಲ್ಲಿ ಹೋಗುತ್ತಿದ್ದ ಮಾರುತಿ ಆಮ್ನಿಯನ್ನು ಅಬಕಾರಿ ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ 77.760 ಲೀ. ಮದ್ಯ ಹಾಗೂ 125.040 ಲೀ. ಬಿಯರ್‌ ಅನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆಯಲಾಗಿದೆ. ಕಾರು ಸಹಿತ ವಶಕ್ಕೆ ಪಡೆದ ಮಾಲುಗಳ ಮೌಲ್ಯ 3,28,000 ರೂ. ಅಂದಾಜಿಸಲಾಗಿದೆ. ಕಾರ್ಕಳ ತಾಲೂಕಿನ ಗ್ರೀಷ್ಮ (24) ಮತ್ತು ಸುಕೇಶ (28) ಬಂಧಿತ ಆರೋಪಿಗಳು.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ಅವರ ನಿರ್ದೇಶನದಂತೆ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ರೂಪಾ ಎಂ. ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕ ನಿತ್ಯಾನಂದ, ಸಿಬಂದಿ ಮುನಾಫ್ ಸಾಹೇಬ್‌, ಶಾಂತಪ್ಪ ಏಳಗಿ, ಗೃಹರಕ್ಷಕ ಗಣೇಶ್‌, ಹಿರಿಯ ವಾಹನ ಚಾಲಕ ವೆಂಕಟರಮಣ ಗೊಲ್ಲ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next