Advertisement

ಮೋದಿ ಧಮ್‌ ಇದ್ರೆ ರಾಮ ಮಂದಿರಕ್ಕೆ ಪಾಯ ಹಾಕಲಿ: ಬೆಳ್ಳುಬ್ಬಿ ಸವಾಲು 

05:26 PM Jul 08, 2018 | |

ವಿಜಯಪುರ: ಪ್ರಧಾನಿ ಮೋದಿಗೆ, ಬಿಜೆಪಿ ನಾಯಕರಿಗೆ ಧಮ್‌ ಇದ್ರೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ  ಪಾಯ ಹಾಕಿ ಲೋಕಸಭಾ ಚುನಾವಣಾ ಪ್ರಚಾರಕ್ಕಿಳಿಯಲಿ ಎಂದು ಮಾಜಿ ಸಚಿವ , ಜೆಡಿಎಸ್‌ ಮುಖಂಡ ಎಸ್‌.ಕೆ.ಬೆಳ್ಳುಬ್ಬಿ ಸವಾಲು ಹಾಕಿದ್ದಾರೆ. 

Advertisement

ಭಾನುವಾರ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಬಾಬ್ರಿ ಮಸೀದಿ ಧ್ವಂಸದ ವೇಳೆ ಯುವಕರನ್ನು ಬಲಿ ನೀಡಿದರು, ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರನ್ನು ಬಲಿ ನೀಡಿದರು. ರಾಮ ಮಂದಿರದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. 

ಬಿಜೆಪಿಯವರು ಮೋದಿ ಹೆಸರಿನಲ್ಲಿ ಕತ್ತೆ ನಿಲ್ಲಿಸಿದರೂ ಗೆಲ್ಲುತ್ತದೆ ಅಂದುಕೊಂಡಿದ್ದಾರೆ.ಟಿಕೆಟ್‌ಗಳನ್ನು ಮಾರಿಕೊಂಡಿದ್ದಾರೆ ಎಂದು ಕಿಡಿ ಕಾರಿದರು. 

ಇದೇ ವೇಳೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಸಿಕ್ಕರೆ ಸ್ಪರ್ಧಿಸಲು ಸಿದ್ಧ . ಈ ಬಾರಿ ಬಿಜೆಪಿ ಸಂಸದನ್ನು ನಾವು ಸೋಲಿಸುತ್ತೇವೆ ಎಂದರು. 

ಬೆಳ್ಳುಬ್ಬಿ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆಪರೇಷನ್‌ ಕಮಲವಾದಾಗ ಸಚಿವ ಸ್ಥಾನವನ್ನೂ ಬಿಟ್ಟುಕೊಟ್ಟಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ ಸೇರ್ಪಡೆಯಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next