Advertisement

Bellary; ಜೈಲು ಪಕ್ಕದ ದೇವಸ್ಥಾನದಲ್ಲಿ ದರ್ಶನ್‌ ಅಭಿಮಾನಿಗಳಿಂದ ಪೂಜೆ

01:17 PM Aug 30, 2024 | Team Udayavani |

ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ (Darshan) ಬಿಡುಗಡೆಗೆ ಹಾರೈಸಿ ಅಭಿಮಾನಿಗಳು ದುರ್ಗಮ್ಮ ದೇಗುಲದಲ್ಲಿ (ಆ.30) ವಿಶೇಷ ಪೂಜೆ ಮಾಡಿಸಿದ್ದಾರೆ.

Advertisement

ಅಭಿಮಾನಿಗಳು ದುರ್ಗಮ್ಮ ಬೃಹತ್ ಮೂರ್ತಿಗೆ ಹಾರ ಹಾಕಿ ನೂರು ತೆಂಗಿನಕಾಯಿ ಒಡೆದರು. ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜುನಾಥ ಬಳಿಗಾರ ನೇತೃತ್ವದಲ್ಲಿ ಪೂಜೆ ನಡೆಸಲಾಗಿದೆ.

ಬಾಸ್ ತಪ್ಪು ಮಾಡಿಲ್ಲ ಅವರ ಜೊತೆಗೆ ಇರುವವರು ತಪ್ಪು ಮಾಡಿದ್ದಾರೆ. ಆ ತಪ್ಪು ದರ್ಶನ್ ಮೇಲೆ ಬಂದಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕನಕ ದುರ್ಗಮ್ಮ ದೇವಸ್ಥಾನವು ಬಳ್ಳಾರಿ ಜೈಲಿನಿಂದ ಅನತಿ ದೂರದಲ್ಲಿದೆ. ಹೀಗಾಗಿ ದುರ್ಗಮ್ಮ ದೇವರ ಆಶೀರ್ವಾದದಿಂದ ದರ್ಶನ್ ಗೆ ಶೀಘ್ರದಲ್ಲೇ ಜಾಮೀನಿನ ಮೇಲೆ ಹೊರಬರಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next