Advertisement

ವಿಮ್ಸ್‌ ರೋಗಿಗಳಿಗೆ ಊಟ ಬಡಿಸಿದ ನ್ಯಾಯಾಧೀಶರು

04:54 PM Apr 24, 2020 | Naveen |

ಬಳ್ಳಾರಿ: ನಗರದ ವಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ಹಾಗೂ ರೋಗಿಗಳೊಂದಿಗೆ ಬಂದಿರುವವರಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೃಷ್ಣ ಅಸೋಡೆ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಅರ್ಜುನ್‌ ಮಲ್ಲೂರ್‌ ಅವರು ಗುರುವಾರ ಊಟ ಬಡಿಸಿದರು.

Advertisement

ಕೋವಿಡ್‌-19 ಹಿನ್ನೆಲೆಯಲ್ಲಿ ನ್ಯಾಯವಾದಿ ಕೋಟೇಶ್ವರರಾವ್‌ ಎನ್ನುವವರು ತಮ್ಮ ಎನ್‌ಜಿಒ ಮೂಲಕ ವಿಮ್ಸ್‌ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಊಟ ವಿತರಿಸುವುದನ್ನು ಪರಿಶೀಲಿಸಿ ಸ್ವತಃ ನ್ಯಾಯಾಧೀಶರೇ ಊಟ ಬಡಿಸಿದರು. ಇಂಥ ಸಂಕಷ್ಟದ ಸಂದರ್ಭದಲ್ಲಿ ರೋಗಿಗಳಿಗೆ ಊಟ ವಿತರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೃಷ್ಣ ಅಸೋಡೆ ಅವರು ಕೋವಿಡ್‌ ಮುಗಿಯುವವರೆಗೆ ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಅವರಿಗೆ ಸೂಚಿಸಿದರು ಮತ್ತು ಇದೇ ಸಂದರ್ಭದಲ್ಲಿ ಕೋವಿಡ್‌ ಕುರಿತು ಜಾಗೃತಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next