Advertisement

Bellary Jail: ದರ್ಶನ್ ರಾಜನಂತೆ ಇರುತ್ತಾರೆ..: ಮಾಜಿ ಕೈದಿ ಹೇಳಿಕೆ!!

05:36 PM Aug 28, 2024 | Team Udayavani |

ಬಳ್ಳಾರಿ: ನಟ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರ ವಾಗುವ ಮುನ್ನ ಮಾಜಿ ಕೈದಿಯೊಬ್ಬ ಗಂಭೀರ ಆರೋಪ ಮಾಡಿ ಗಮನ ಸೆಳೆದಿದ್ದಾನೆ.

Advertisement

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದ ಜಯಸಿಂಹ ಹೇಳಿಕೆ ನೀಡಿದ್ದು, ”ನಾನು ಬಳ್ಳಾರಿ ಜೈಲಿನಲ್ಲಿ 2016 ರಿಂದ 2021ರವರೆಗೆ ಗಲಾಟೆ ಪ್ರಕರಣಕ್ಕೆ ಜೈಲು ಬಂಧಿಯಾಗಿದ್ದೆ. ಇಲ್ಲಿ ಹಣ ಇದ್ದರೆ ಕೈದಿಗಳಿಗೆ ಎಲ್ಲವೂ ಸಿಗಲಿದೆ‌. ದೊಡ್ಡ ಕೈದಿಗಳಿಗೆ ಬಿರಿಯಾನಿ, ಗಾಂಜಾ, ಗುಟ್ಕಾ ಸಹ ಸಿಗಲಿದೆ. ಫೋನ್ ಪೇ ಮೂಲಕ ಹಣವೂ ಸಿಗಲಿದೆ. ಅದೇ ಸಣ್ಣ, ಬಡ ಕೈದಿಗಳಿಗೆ ಏನೂ ಸಿಗುವುದಿಲ್ಲ’ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Darshan ಶಿಫ್ಟ್ ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿ ಹೈ ಅಲಟ್೯:ಸಿಬಂದಿಗಳಿಗೆ ಎಚ್ಚರಿಕೆ

”ನೋಡಲು ಬರುವ ಸಂಬಂಧಿಕರು, ತಮ್ಮ ಕೈದಿಯೊಂದಿಗೆ ಅಲ್ಲಿನ ಜೈಲು ಗಾರ್ಡ್‌ಗಳಿಗೂ ಊಟ, ಉಪಹಾರ ನೀಡಬೇಕು. ಇಲ್ಲದಿದ್ದಲ್ಲಿ ನೂರು, ಇನ್ನೂರು ನೀಡಬೇಕು. ಬೆಂಗಳೂರು ಜೈಲಿನಲ್ಲಿ ಮಂತ್ರಿಯಂತೆ ಇದ್ದ ದರ್ಶನ್ ಬಳ್ಳಾರಿ ಜೈಲಲ್ಲಿ ಸಿಗುವ ಸೌಲಭ್ಯಗಳಿಂದ ರಾಜನಂತೆ ಇರುತ್ತಾರೆ” ಎಂದು ಆರೋಪಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next