Advertisement

ಸ್ವಂತ ಹಣದಲ್ಲಿ ಆಹಾರ ಧಾನ್ಯ ವಿತರಣೆ

05:21 PM Apr 20, 2020 | Naveen |

ಬಳ್ಳಾರಿ: ಕೋವಿಡ್‌-19ನ ಈ ಲಾಕ್‌ ಡೌನ್‌ ಸಂದರ್ಭದಲ್ಲಿ ಕೋವಿಡ್ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್‌.ಎನ್‌. ಶಿವರಾಜ್‌ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾವಿಹಾಳದ ವಿಕಲಚೇತನರು, ಹಿರಿಯ ನಾಗರಿಕರು, ವಿಧವೆಯರ ಕುಟುಂಬಗಳಿಗೆ ಪಡಿತರ ಕಿಟ್‌ನ್ನು ಭಾನುವಾರ ವಿತರಿಸಿದರು.

Advertisement

ಕೋವಿಡ್ ಸೈನಿಕ ಆರ್‌.ಎನ್‌. ಶಿವರಾಜ್‌ ಅವರು 20 ಸಾವಿರ ರೂಗಳ ಸ್ವಂತ ವೆಚ್ಚದಲ್ಲಿ ಅಕ್ಕಿ, ಬೆಳೆ, ಎಣ್ಣೆ, ಹಿಟ್ಟು, ಸಕ್ಕರೆ ಸೇರಿದಂತೆ ಅವಶ್ಯಕ ಆಹಾರ ಪದಾರ್ಥಗಳ ಪಡಿತರ ಕಿಟ್‌ ನ್ನು 100ಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಿಸಿದರು. ಮೊದಲಿಗೆ ಗ್ರಾಮದ ಕನಕ ವೃತ್ತದ ಆವರಣದಲ್ಲಿ ವಿತರಿಸಿದ ಅವರು ನಂತರ ಈ ಮುಂಚೆಯೇ ಗುರುತಿಸಲಾದವರ ಮನೆ-ಮನೆಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಆರ್‌.ಟಿ. ಆದೇಪ್ಪ, ಗಂಗಾಧರ್‌, ನಾಗರಾಜ, ದೇವಿಪುತ್ರ, ವೀರೇಶ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next