Advertisement

Bellary; ನಮ್ಮೆಲ್ಲಾ ನಾಯಕರು ರಾಮ ದೇವರೆಂದು ಒಪ್ಪಿಕೊಂಡಿದ್ದಾರೆ: ಸಚಿವ ನಾಗೇಂದ್ರ

03:33 PM Jan 15, 2024 | Team Udayavani |

ಬಳ್ಳಾರಿ: ನಮ್ಮ ಪ್ರತಿ ಕಾಂಗ್ರೆಸ್ ನವರಿಗೆ ರಾಮ ದೇವರು. ಒಂದು ಪಕ್ಷಕ್ಕೆ ರಾಮ ದೇವರಲ್ಲ, ಇಡೀ ವಿಶ್ವಕ್ಕೆ ದೇವರು. ಸಿದ್ದರಾಮಯ್ಯ ನವರ ಹೆಸರಲ್ಲೇ ರಾಮನಿದ್ದಾನೆ. ನಮ್ಮೆಲ್ಲಾ ನಾಯಕರು ರಾಮ ದೇವರೆಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಅವರು ರಾಮಮಂದಿರ ವಿಷಯವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ನಾಗೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂಜಾರಿಗಳು ಸ್ವಾಮಿಜಿಗಳಲ್ಲೇ ಪರ ವಿರೋಧ ಇದೆ. ನಮ್ಮ ರಾಮ ಎಲ್ಲರ ರಾಮ, ನಮಗೆ ಕುಟುಂಬ ಸಮೇತ ರಾಮ ಬೇಕು. ಬಿಜೆಪಿ ಅವರು ಅವರ ಪಕ್ಷದ ರಾಮ ಎನ್ನುವಂತೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ರಾಮನ ವಿರೋಧಿಗಳು ಎಂದು ಬಿಜೆಪಿ ಬಿಂಬಿಸುತ್ತದೆ. ನಾವು ರಾಮನ ವಿರೋಧಿ ಅಲ್ಲವೇ ಅಲ್ಲ. ನಾವು ರಾಮ ರಾಜ್ಯವನ್ನ ಕಂಡು ನಾವು ಪಕ್ಷ ಸ್ಥಾಪನೆ ಮಾಡಿದ್ದೇವೆ ಎಂದರು.

ವಾಲ್ಮೀಕಿ ಉಲ್ಲೇಖ ಮಾಡಿದ ರೀತಿಯ ರಾಮ ನಮಗೆ ಬೇಕು, ಬಿಜೆಪಿ ಅವರು ಬಿಂಬಿಸುವ ರೀತಿಯಲ್ಲ. ರಾಮ ಈ ಪ್ರಪಂಚದ ಆಸ್ತಿ, ದೇಶದ ಆಸ್ತಿ, ಹಾಗೇ ನಮ್ಮ ಕಾಂಗ್ರೆಸ್ ನ ಆಸ್ತಿ‌ಕೂಡಾ ಹೌದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next