Advertisement

ಬಳ್ಳಾರಿ : ಹುಚ್ಚು ನಾಯಿಯಿಂದ ಕಡಿತಕ್ಕೊಳಗಾಗಿದ್ದ ಮಗು ಸಾವು

11:15 PM Feb 25, 2023 | Team Udayavani |

ಬಳ್ಳಾರಿ : ಹುಚ್ಚು ನಾಯಿಯೊಂದು ಕಚ್ಚಿ ತೀವ್ರವಾಗಿ ಗಾಯಗೊಂಡಿದ್ದ ತೊಯ್ಬಾ (3) ಎಂಬ ಶನಿವಾರ ಬೆಳಗ್ಗೆ ಮೃತ ಪಟ್ಟಿದೆ. ಸಂಜೆ ಅಂತ್ಯಕ್ರಿಯೆ ನಡೆಸಲಾಗಿದೆ.

Advertisement

ಇಲ್ಲಿನ ಕೌಲ್ ಬಜಾರ್ ಪ್ರದೇಶದ ವಟ್ಟಪ್ಪಗೇರಿಯಲ್ಲಿ ಹುಚ್ಚುನಾಯಿ ಫೆ.6 ರಂದು ಭಾನುವಾರ ರಾತ್ರಿಯಿಂದ ಫೆ.7 ರಂದು ಸೋಮವಾರ ಬೆಳಗ್ಗೆ ವರೆಗೆ ಸುಮಾರು 21 ಜನರಿಗೆ ಕಚ್ಚಿತ್ತು. ಇವರಲ್ಲಿ ತೊಯ್ಬಾಳಿಗೆ ಮುಖಕ್ಕೆ ಕಚ್ಚಿ ಗಾಯ ಮಾಡಿತ್ತು. ಮಗುವನ್ನು ವಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚುವರಿ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಗೆ ಕಳುಹಿಸಿಲಾಗಿತ್ತು. ಅಲ್ಲಿನ ವೈದ್ಯರು ಮಗು ಬದುಕಿ ಉಳಿಯುವುದು ಕಷ್ಟ ಎಂದು ಹೇಳಿದ್ದರಿಂದ ಬಳ್ಳಾರಿಗೆ ವಾಪಾಸ್ಸು ಕರೆ ತರಲಾಗಿತ್ತು.

ಜಿಲ್ಲೆಯಲ್ಲಿ ಹುಚ್ಚು ನಾಯಿಗೆ ಮಗು ಬಲಿಯಾದ ಮೂರನೇ ಪ್ರಕರಣ ಇದಾಗಿದ್ದು, ನ.21 ಮತ್ತು 22 ರಂದು ಕುರುಗೋಡು ತಾಲ್ಲೂಕಿನ ಬಾದನಹಟ್ಟಿಯಲ್ಲಿ ಸುರಕ್ಷಿತ (3) ಮತ್ತು ಶಾಂತಕುಮಾರ್ (7) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next