Advertisement

Bellary: 5.60 ಕೋ.ರೂ., 3 ಕೆ.ಜಿ. ಚಿನ್ನಾಭರಣ ವಶ!

01:03 AM Apr 08, 2024 | Team Udayavani |

ಬಳ್ಳಾರಿ: ಚುನಾವಣೆ ಪ್ರಚಾರ ಭರಾಟೆ ಮುಂದುವರಿದಿರುವಂತೆಯೇ ಬಳ್ಳಾರಿಯಲ್ಲಿ ಚಿನ್ನಾಭರಣ ವ್ಯಾಪಾರಿ ಮನೆ ಮೇಲೆ ದಾಳಿ ನಡೆಸಿ ದಾಖಲೆ ರಹಿತ 5.60 ಕೋಟಿ ರೂ. ನಗದು, 1.46 ಕೋ. ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಚಿನ್ನದ ವ್ಯಾಪಾರಿ ನರೇಶ್‌ ಸೋನಿ ಎನ್ನುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಅವರು ದಾಖಲೆಯಿಲ್ಲದೆ ಹಣ, ಚಿನ್ನ, ಬೆಳ್ಳಿ ಆಭರಣಗಳನ್ನು ಮನೆಯಲ್ಲಿ ಇರಿಸಿಕೊಂಡಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಎಸ್‌ಪಿ ರಂಜಿತ್‌ ಕುಮಾರ್‌ ಬಂಡಾರು ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚಂದ್ರಕಾಂತ್‌ ನಂದಾರೆಡ್ಡಿ, ಬ್ರೂಸ್‌ಪೇಟೆ ಸಿಪಿಐ ಎಂ.ಎನ್‌.ಸಿಂಧೂರ ಮತ್ತು ಎಫ್‌ಎಸ್‌ಟಿ ತಂಡದೊಂದಿಗೆ ದಾಳಿ ಮಾಡಿ ಹಣ, ಆಭರಣ ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಆಭರಣ ಮಳಿಗೆ ಹೊಂದಿರುವ ನರೇಶ್‌ ಸೋನಿ ಅವರು ಸಗಟು, ಚಿನ್ನದ ಬಿಸ್ಕತ್‌ ವ್ಯಾಪಾರ ಮಾಡುತ್ತಿದ್ದಾರೆ. ಜತೆಗೆ ಈ ಹಿಂದೆ ಕೆಆರ್‌ಪಿ ಪಕ್ಷದೊಂದಿಗೂ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next