Advertisement

ಬೆಳಗಾವಿ ಶಾಂತವಾಗಿದ್ದು,ಬೆಂಕಿ ಬಿದ್ದಿಲ್ಲ;ಪುಂಡರನ್ನೇ ಬಂಧಿಸಲಾಗಿದೆ: ಸರಕಾರ

12:17 PM Dec 20, 2021 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಪುಂಡಾಟಿಕೆ ಮಾಡಿದವರನ್ನೇ ಬಂಧಿಸಲಾಗಿದ್ದು, ಹಿಂದಿನ ಸರ್ಕಾರಗಳು ಯಾವತ್ತಿಗೂ ಈ ರೀತಿಯ ಕೆಲಸವನ್ನು ಮಾಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಪ್ರಮುಖರನ್ನು ಅರೆಸ್ಟ್ ಮಾಡಿ, ನಿಯಂತ್ರಣ ಮಾಡಿಸಿದ್ದೇವೆ. ಮಹಾರಾಷ್ಟ್ರ ಸರ್ಕಾರದ ಹೋಮ್ ಸೆಕ್ರೆಟರಿ ಜೊತೆ ಮಾತನಾಡಿದ್ದೇವೆ. ನಮ್ಮ ಡಿಜಿಯವರು ಅಲ್ಲಿನ ಸೆಕ್ರೆಟರಿ ಜೊತೆ ಮಾತಾಡಿದ್ದಾರೆ. ಕನ್ನಡಿಗರ ಆಸ್ತಿ ಪಾಸ್ತಿ ರಕ್ಷಣೆ ಮಾಡಬೇಕು, ಅಲ್ಲಿನ ವಾಹನಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದ್ದೇವೆ. ಇವತ್ತು ಕೂಡ ಅವರಿಗೆ ಮಾತಾಡಲು ನಿರ್ದೇಶನ ಕೊಡುತ್ತೇನೆ, ಈ ರೀತಿ ಕಾನೂನು ಸುವ್ಯವಸ್ಥೆ ಕೈಗೆ ಎತ್ತಿಕೊಂಡರೆ, ಅತ್ಯಂತ ಬಿಗಿಯಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಒಂದು ನಿರ್ಣಯ ಮಾಡಿ, ಈ ರೀತಿ ಘಟನೆ ಆಗದ ರೀತಿ ಕ್ರಮ ವಹಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ :ರಾಯಣ್ಣ ಪ್ರತಿಮೆ ವಿರೂಪದ ಹಿಂದೆ ಎಂಇಎಸ್ ಕೈವಾಡವಿದೆಯೆಂದು ಹೇಳಲಾಗದು: ಡಿಕೆಶಿ

ಇಲ್ಲಿ ಬೆಂಕಿ ಬಿದ್ದಿಲ್ಲ

ಗೃಹ ಸಚಿವ ಆರಗ ಜ್ಙಾನೇಂದ್ರ ಅವರು ಮಾತನಾಡಿ, ಬೆಳಗಾವಿಯಲ್ಲಿ ಏನೂ ಬೆಂಕಿ ಬಿದ್ದಿಲ್ಲ, ಶಾಂತವಾಗಿದೆ. ಕನ್ನಡಿಗರು, ಮರಾಠಿಗರು ಸೌಹಾರ್ದಯುತವಾಗಿದ್ದಾರೆ. ಕನ್ನಡ ಸಂಘಟನೆಗಳು ಶಾಂತಯುತವಾಗಿ ಪ್ರತಿಭಟಿಸಲಿ ಎಂದರು.

Advertisement

ಎಂಇಎಸ್ ಅನ್ನು ಜನರೇ ಬ್ಯಾನ್ ಮಾಡಿದ್ದಾರೆ. ಎಂಇಎಸ್ ಬ್ಯಾನ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು. ಸಿಎಂ ಜೊತೆ ಇದರ ಬಗ್ಗೆ ಚರ್ಚಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next