Advertisement

ಬೆಳಗಾವಿ ವಿವಾದ: ಸುಪ್ರೀಂ ತೀರ್ಪು ಎಲ್ಲರಿಗೂ ಸಮ್ಮತ

11:14 PM Jan 18, 2020 | Team Udayavani |

ಮುಂಬೈ: ಕರ್ನಾಟಕದ ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡಲು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬಂದಿದ್ದ ಸಚಿವ ರಾಜೇಂದ್ರ ಪಾಟೀಲ್‌ ಯಡ್ರಾವ್ಕರ್‌ರನ್ನು ವಾಪಸ್‌ ಕಳುಹಿಸಿದ ಬೆನ್ನಲ್ಲಿಯೇ ಶನಿವಾರ ಪ್ರತಿಕ್ರಿಯೆ ನೀಡಿದ ಶಿವಸೇನೆ ವಕ್ತಾರ ಸಂಜಯ ರಾವುತ್‌, ಬೆಳಗಾವಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ಅಂತಿಮ. ಅದು ಎಲ್ಲರಿಗೂ ಒಪ್ಪಿಗೆಯಾಗಬೇಕು ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, “ನಮ್ಮ ದೇಶ ಕಾನೂನುಗಳಿಂದ ವ್ಯವಹರಿಸುತ್ತದೆ. ಜತೆಗೆ ಸಂವಿಧಾನವೂ ಇದೆ. ಸದ್ಯ ಈ ಪ್ರಕ ರಣ ಸುಪ್ರೀಂ ನಲ್ಲಿ ವಿಚಾರಣೆಯ ಹಂತದಲ್ಲಿದೆ. ಅದರ ತೀರ್ಮಾನ ಎಲ್ಲರಿಗೂ ಒಪ್ಪಿಗೆಯಾಗಬೇಕು’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next