Advertisement

ಪ್ರತಿಕೂಲ ಹವಾಮಾನ: ಹೈದರಾಬಾದ್ , ತಿರುಪತಿ  ವಿಮಾನ ಸಂಚಾರ ರದ್ದು

04:07 PM May 16, 2021 | Team Udayavani |

ಬೆಳಗಾವಿ : ತೌಕ್ತೆ  ಚಂಡಮಾರುತದ ಬಿಸಿ ವಿಮಾನ ಸಂಚಾರಕ್ಕೂ ತಟ್ಟಿದ್ದು ಪ್ರತಿಕೂಲ ಹವಾಮಾನದಿಂದಾಗಿ ಹೈದರಾಬಾದ್ ಹಾಗೂ ತಿರುಪತಿ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ.

Advertisement

ಈ ಕುರಿತು ಟ್ವೀಟ್ ಮಾಡಿರುವ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ, ಬೆಳಗಾವಿ ಸುತ್ತ ಭಾನುವಾರ ಬೆಳಿಗ್ಗೆಯಿಂದ ಭಾರೀ ಗಾಳಿ ಹಾಗೂ ಮಳೆ ಸುರಿಯುತ್ತಿದ್ದು ಇದರಿಂದಾಗಿ ಹೈದರಾಬಾದ್ ಹಾಗೂ ತಿರುಪತಿ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ.ಪರಿಸ್ಥಿತಿಯನ್ನು ನೋಡಿಕೊಂಡು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸೂಚನೆಯಂತೆ ಕ್ರಮವಹಿಸಲಾಗುವದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಾದಾಮಿ ಕ್ಷೇತ್ರಕ್ಕೆ ಮೂರು ಆಂಬುಲೆನ್ಸ್ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಕರಾವಳಿ ಪ್ರದೇಶದೆಲ್ಲೆಡೆ ತೌಕ್ತೆ ಚಂಡಮಾರುತದ ಪರಿಣಾಮದಿಂದ ರಾಜ್ಯದ ಹಲವು ಕಡೆ ಹವಾಮಾನ ಬದಲಾಗಿದ್ದು, ಬೆಳಗಾವಿಯಲ್ಲಿ ರವಿವಾರ ಮುಂಜಾನೆಯಿಂದ ವಿಪರೀತ ಗಾಳಿ ಮಳೆ ಸುರಿಯುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next