Advertisement

ಬೆಳಗಾವಿಯ ಹಿಂದೂ ಸಂಘಟನೆ ಮುಖಂಡನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

09:14 PM Jan 07, 2023 | Team Udayavani |

ಬೆಳಗಾವಿ: ಹಿಂಡಲಗಾ ಗ್ರಾಮದಲ್ಲಿ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಹಾಗೂ ಶ್ರೀರಾಮಸೇನಾ ಮುಖಂಡ ರವಿ ಕೋಕಿತಕರ ಹಾಗೂ ಇವರ ಕಾರು ಚಾಲಕನ ಮೇಲೆ ಶನಿವಾರ ರಾತ್ರಿ ಫೈರಿಂಗ್ ಮಾಡಲಾಗಿದೆ.

Advertisement

ಹಿಂಡಲಗಾ ಗ್ರಾಮದ‌ ಪ್ರಾಥಮಿಕ ಮರಾಠಿ ಶಾಲೆ ಬಳಿಯಿಂದ ಸ್ಕಾರ್ಪಿಯೋ ಕಾರಿನಲ್ಲಿ ತೆರಳುತ್ತಿದ್ದರು. ಆಗ ಅಪರಿಚಿತರು ಬಂದು ಏಕಾಏಕಿ ಫೈರಿಂಗ್ ಮಾಡಿದ್ದಾರೆ. ಬಂದೂಕಿನ‌ ಗುಂಡು ರವಿ ಕೋಕಿತಕರ ಅವರ ಮುಖ ಭಾಗದ ಗದ್ದಿಗೆ ತಗುಲಿದೆ.‌ ಕಾರು ಚಾಲಕನ ಕೈಗೆ ಗುಂಡು ತಗುಲಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಉಳ್ಳಾಲ: ಮಾದಕ ದ್ರವ್ಯ ಮಾರಾಟಕ್ಕೆ ಯತ್ನ: ಎಂಡಿಎಂಎ ಸಹಿತ ಆರೋಪಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next