Advertisement

ಬೆಳಗಾವಿ: ಆಸ್ತಿಗಾಗಿ ಇಬ್ಬರು ತಮ್ಮಂದಿರನ್ನೇ ಕೊಂದ ಕ್ರೂರಿ ಅಣ್ಣ!

04:38 PM Jul 11, 2017 | Team Udayavani |

ಬೆಳಗಾವಿ:ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನೇ ಇಬ್ಬರು ತಮ್ಮಂದಿರನ್ನು ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಬೆಳಗಾವಿಯ ಅಲರವಾಡದ ಗಾಂಧಿನಗರದಲ್ಲಿ ಮಂಗಳವಾರ ನಡೆದಿದೆ.

Advertisement

ವರದಿಯ ಪ್ರಕಾರ, ರಸೂಲ್ ತನ್ನ ತಮ್ಮಂದಿರಾದ ಮೊಹಮ್ಮದ್ ಗೌಸ್ ಹಾಗೂ ಮುಲ್ಲಾ ಗೌಸ್ ಅವರನ್ನು ಕೊಚ್ಚಿ ಕೊಲೆಗೈದಿರುವುದಾಗಿ ತಿಳಿಸಿದೆ.

ಆಸ್ತಿ ವಿಚಾರದಲ್ಲಿ ಕೊಲೆಗೈದಿರುವ ಸಾಧ್ಯತೆ ಇದ್ದಿರುವುದಾಗಿ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಡಿಸಿಪಿಗಳಾದ ಅಮರನಾಥ ರೆಡ್ಡಿ, ಸೀಮಾ ಲಾಟ್ಕರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮಾಳಮಾರುತಿ ಪೊಲೀಸರು ಆರೋಪಿ ರಸೂಲ್ ನನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next