Advertisement

ತರೀಕೆರೆ ಬಳಿ ಬಿಯರ್ ಲಾರಿ ಅಪಘಾತ : ಬಾಟಲಿಗಾಗಿ ಮುಗಿಬಿದ್ದ ಜನ!

02:51 PM Apr 20, 2021 | Team Udayavani |

ಚಿಕ್ಕಮಗಳೂರು : ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಅಪಘಾತವಾದ ಘಟನೆಯು ಮಂಗಳವಾರ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿ ನಡೆದಿದೆ. ಈ ವೇಳೆ ಜನರು ಬಿಯರ್ ಗಾಗಿ ಮುಗಿಬಿದ್ದ ಪ್ರಸಂಗ ನಡೆದಿದೆ.

Advertisement

ಬೆಂಗಳೂರಿಂದ ಶಿವಮೊಗ್ಗಕ್ಕೆ ಕಿಂಗ್ ಫಿಶರ್ ಬಿಯರ್ ಬಾಟಲಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯು ಅಪಘಾತವಾಗಿದೆ. ಈ ವೇಳೆ ಲೋ… ನಂಗ್ ಎಲ್ಡ್ ಎತ್ಕೊಡು ಎಂದು ಜನರು ಕೂಗಾಟ ಮಾಡಿದ್ದಾರೆ.

ಒಂದು ಲೋಡ್ ಬಿಯರ್ ಬಾಟಲಿ ಇದ್ದ ಲಾರಿಯು ಉರಿಳಿದೆ. ಒಬ್ಬೊಬ್ಬರ ಕೈಯಲ್ಲಿ ನಾಲ್ಕೈದು ಬಿಯರ್ ಬಾಟಲಿಗಳನ್ನು ಹಿಡಿದು ಓಡಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next