Advertisement

Beejadi ಕ್ರಾಸ್‌ : ಕಾರಿಗೆ ಟಿಪ್ಪರ್‌ ಢಿಕ್ಕಿ; ಚಾಲಕ ಪಾರು

08:44 PM Aug 09, 2024 | Team Udayavani |

ಕುಂದಾಪುರ: ಹೆದ್ದಾರಿ ದಾಟಲು ಸರ್ವಿಸ್‌ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಟಿಪ್ಪರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿಯಾದ ಘಟನೆ ಶುಕ್ರವಾರ (ಆ.9) ರಾಷ್ಟ್ರೀಯ ಹೆದ್ದಾರಿ 66ರ ಬೀಜಾಡಿ ಕ್ರಾಸ್‌ ಬಳಿ ಸಂಭವಿಸಿದೆ. ಅದೃಷ್ಟವಶಾತ್‌ ಚಾಲಕ, ಪ್ರಯಾಣಿಕ ಪಾರಾಗಿದ್ದಾರೆ.

Advertisement

ಕಾರು ಕೋಟೇಶ್ವರ ಒಳಪೇಟೆ ಕಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಬಂದು, ಬೀಜಾಡಿ ಕ್ರಾಸ್‌ ಬಳಿ ಹೆದ್ದಾರಿ ದಾಟಲೆಂದು ನಿಂತಿದ್ದು, ಈ ವೇಳೆ ತೆಕ್ಕಟ್ಟೆ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್‌ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದು ಡಿವೈಡರ್‌ ಹತ್ತಿ ನಿಂತಿದೆ. ಈ ಅವಘಡಕ್ಕೆ ಟಿಪ್ಪರ್‌ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಢಿಕ್ಕಿಯಾದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಜಖಂಗೊಂಡಿದೆ. ಅದೃಷ್ಟವಶಾತ್‌ ಕಾರಿನ ಏರ್‌ ಬ್ಯಾಗ್‌ ತೆರೆದಿದ್ದರಿಂದ ಕಾರಿನಲ್ಲಿದ್ದ ಚಾಲಕ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next