Advertisement

ಸರಕಾರಿ ಬಸ್ಸಿನಲ್ಲಿ ದನದ ಮಾಂಸ ಸಾಗಾಟ: ನಿರ್ವಾಹಕನ ಬಂಧನ

11:15 PM Jul 21, 2019 | Team Udayavani |

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ದನದ ಮಾಂಸ ಸಾಗಾಟದ ಪ್ರಕರಣ ಪುತ್ತೂರಿನಲ್ಲಿ ಬೆಳ ಕಿಗೆ ಬಂದಿದ್ದು, ಈ ಸಂಬಂಧ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಹರಿಹರ ಬಾಳುಗೋಡು ಬಸ್ಸಿನಲ್ಲಿ ಮಾಂಸ ಪತ್ತೆಯಾಗಿದ್ದು, ನಿರ್ವಾಹಕ ಬೆಳಗಾವಿಯ ಪಶುವಾಪುರ ನಿವಾಸಿ ಸುನಿಲ್‌ (44) ಬಂಧಿತ ಆರೋಪಿ.

Advertisement

ಬಸ್ಸಿನ ಹಿಂಬದಿಯ ಸೀಟಿನ ಅಡಿಯಲ್ಲಿಟ್ಟಿದ್ದ 9 ಕೆ.ಜಿ. ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರಿನಿಂದ ಹರಿಹರ ಬಾಳುಗೋಡಿಗೆ ಬೆಳಗ್ಗೆ 6.30ಕ್ಕೆ ಹೊರಟ ಬಸ್ಸಿನ ಲ್ಲಿ ದನದ ಮಾಂಸ ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಡಿಪಿಲ ಸಮೀಪ ಸುಮಾರು 7 ಗಂಟೆಗೆ ತಪಾಸಣೆ ನಡೆಸಿದರು. ಈ ವೇಳೆ ಬಸ್ಸಿನ ಹಿಂಬದಿಯ ನಿರ್ವಾಹಕನ ಸೀಟ್‌ ಬಳಿ ಇದ್ದ ಗೋಣಿ ಚೀಲದಲ್ಲಿ ದನದ ಮಾಂಸ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next