Advertisement

ಬೀದರ: 12 ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ ಜಪ್ತಿ; ನಾಲ್ವರ ಬಂಧನ

07:30 PM Sep 10, 2020 | mahesh |

ಬೀದರ: ಔರಾದ ಪಟ್ಟಣದ ಚನ್ನಬಸವೇಶ್ವರ ಬಡಾವಣೆಯ ಮನೆಯೊಂದರ ಮೇಲೆ ಪೊಲೀಸ ಅಧಿಕಾರಿಗಳ ತಂಡ ದಾಳಿ ನಡೆಸಿ ಸುಮಾರು 12.50 ಲಕ್ಷ ರೂ. ಮೌಲ್ಯದ 2 ಕ್ವಿಂಟಾಲ್ ಶ್ರೀಗಂಧದ ಮರದ ಕಟ್ಟಿಗೆಯನ್ನು ಜಪ್ತಿ ಮಾಡಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

Advertisement

ಮನೆಯಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಇಡಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ, ಔರಾದ ಠಾಣೆಯ ಪೊಲೀಸರು ನ್ಯಾಯಾಲಯದಿಂದ ಮನೆ ಶೋಧನಾ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ. ಈ ವೇಳೆ 12 ಲಕ್ಷ ಮೌಲ್ಯದ 2 ಕ್ವಿಂ. ಶ್ರೀಗಂಧ ಮರದ ಕಟ್ಟಿಗೆ, 50 ಸಾವಿರ ವೌಲ್ಯದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿ, ಸಂತೋಷ ವಿಶ್ವನಾಥ ಡ್ಯಾಡಂಗಲೆ, ನರಸಿಂಗ್ ತುಳಸಿರಾಮ್ ಮಾನೆ, ಶಿವಕುಮಾರ ಲಕ್ಷ್ಮಣ ದ್ಯಾಡಂಗಲೆ, ಅಶೋಕ ರಾಜಪ್ಪ ಹೆಳವಾ ಅವರನ್ನು ಬಂಧಿಸಿದ್ದಾರೆ. ಔರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್ಪಿ ದೇವರಾಜು ಬಿ., ಸಿಪಿಐ ಟಿ.ಆರ್. ರಾಘವೇಂದ್ರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಪಿಎಸ್‌ಐ ಸುವರ್ಣ, ಎಎಸ್‌ಐ ರಮೇಶ, ಸಿಬ್ಬಂದಿಗಳಾದ ಸುನೀಲ ಕೋರಿ, ರಾಜಕುಮಾರ, ಮಲ್ಲಮ್ಮ, ಶರಣಪ್ಪ, ರಾಜಕುಮಾರ ಪಂಚಾಳ, ನರಸರೆಡ್ಡಿ, ಶ್ರೀನಿವಾಸ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next