Advertisement

ವಚನಾನಂದ ಸ್ವಾಮೀಜಿ ಹೇಳಿಕೆಗೆ ಬೇಡ ಜಂಗಮರ ಖಂಡನೆ

03:40 PM Feb 26, 2021 | Team Udayavani |

ಬನಹಟ್ಟಿ: ಬೇಡ ಜಂಗಮರ ವಿರುದ್ಧ ಹಗುರವಾಗಿ ಮಾತನಾಡಿದ ವಚನಾನಂದ ಸ್ವಾಮೀಜಿ ವಿರುದ್ಧ ರಬಕವಿ-ಬನಹಟ್ಟಿ ತಾಲೂಕು ಬೇಡ ಜಂಗಮದವರು ಪ್ರತಿಭಟನೆ ನಡೆಸಿ, ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಬೇಡ ಜಂಗಮರ ವಿರುದ್ಧ ನೀಡಿರುವ ಹೇಳಿಕೆಯನ್ನು ಬೇಡ ಜಂಗಮ ಸಮಾಜ ಖಂಡಿಸುತ್ತದೆ ಎಂದು ರಬಕವಿ-ಬನಹಟ್ಟಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರ ಕಾಡದೇವರ ಹೇಳಿದರು.

ವಚನಾನಂದ ಸ್ವಾಮೀಜಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಉಪತಹಶೀಲ್ದಾರ್‌ ಎಸ್‌.ಎಲ್‌  ಕಾಗಿಯವರ ಅವರಿಗೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ಗಂಗಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ವೀರಭದ್ರಶಾಸ್ತ್ರಿ ಹಿರೇಮಠ, ದುಂಡಯ್ನಾ ಕಾಡದೇವರ, ಗುರುಬಸಯ್ನಾ ಜಮಖಂಡಿ, ಶಂಕರ ಅಂಗಡಿ, ಮುತ್ತು ಹಿರೇಮಠ, ಮಹಾದೇವ ಮಠದ, ರಾಜೇಂದ್ರ ಮಠದ, ನಿರೂಪಾದಯ್ನಾ ಮಠದ, ಮಳಯಾ ಕಾಡದೇವರ, ಶಂಕ್ರಯ್ನಾ ¸ಂಗಿ, ಈರಯ್ನಾ ವಿಭೂತಿ, ಮಹಾಂತಯ್ಯ ಭದ್ರದ, ಈಶ್ವರಯ್ನಾ ಕಾಡದೇವರ, ನಾಗಯ್ನಾ ಕಾಡದೇವರ, ಗುರುಬಸಯ್ನಾ ವಿಭೂತಿ, ಶಶಿಕಾಂತ ಹುಳಾÂಳಿ, ನಿರೂಪಾದಯ್ನಾ ಮಠದ,ಬ್ರಹ್ಮಾನಂದ ಮಠದ, ಮಹೇಶ್ವರ ಮಠದ, ಕಲ್ಲಯ್ಯ ಕಾಡದೇವರ, ಸುಭಾಸ ಮಠಪತಿ, ಶಿವಲಿಂಗಯ್ನಾ ಮಠಪತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next