Advertisement

ಸೇನಾ ಆಸ್ಪತ್ರೆಗಳಲ್ಲಿ ಬೆಡ್‌ ಖಾತರಿ: ಕೇಂದ್ರಕ್ಕೆ ಹೈ ಸೂಚನೆ

02:53 PM Apr 28, 2021 | Team Udayavani |

ಬೆಂಗಳೂರು: ಕೋವಿಡ್‌-19 ಉಲ್ಬಣಗೊಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಸೇನಾಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಹಾಸಿಗೆ ಸೌಲಭ್ಯಕಲ್ಪಿಸುವ ಸಂಬಂಧ ಖಾತರಿಪಡಿಸುವಂತೆ ಕೇಂದ್ರಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

Advertisement

ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.ವಿಚಾರಣೆ ವೇಳೆ ಬಿಬಿಎಂಪಿ ವರದಿ ಸಲ್ಲಿಸಿ, ಹೈಕೋರ್ಟ್‌ಸೂಚನೆ ನಂತರ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಸೀಮಿತವಾಗಿ ಹೆಚ್ಚಳ ಮಾಡ ಲಾಗಿದೆ.

ಎಚ್‌ಡಿಯುಹಾಸಿಗೆಗಳ ಸಂಖ್ಯೆ 3,490ಕ್ಕೆ ಏರಿಕೆ ಮಾಡಲಾಗಿದೆ.ವೆಂಟಿಲೇಟರ್‌ ಸಹಿತ ಐಸಿಯು ಹಾಸಿಗೆಗಳ ಸಂಖ್ಯೆ418ಕ್ಕೆ ಮತ್ತು ಐಸಿಯು ಸಂಖ್ಯೆ 497ಕ್ಕೆ ಏರಿಕೆಮಾಡಲಾಗಿದೆ ಎಂದು ಮಾಹಿತಿ ನೀಡಿತು. ಸೇನಾಆಸ್ಪತ್ರೆಗಳಲ್ಲಿ ಕೋವಿಡ್‌-19 ಸೋಂಕಿತರ ಚಿಕಿತ್ಸೆಗೆಹಾಸಿಗೆಗಳನ್ನು ಕಲ್ಪಿಸುವಂತೆ ಕೋರಿ ಬಿಬಿಎಂಪಿಸಲ್ಲಿಸಿರುವ ಮನವಿ ಪತ್ರವನ್ನು ನಗರದ ಮಿಲಿಟರಿ ಹಾಗೂವಾಯು ಸೇನೆಯು ತಿರಸ್ಕರಿಸಿದೆ. ಇದು ಜೀವಿಸುವ ಹಕ್ಕಿಗೆಸಂಬಂಧಿಸಿದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next