Advertisement

Modi ಕಾರಣದಿಂದ ಶಂಕರಾಚಾರ್ಯರು ಪ್ರಾಣ ಪ್ರತಿಷ್ಠೆಗೆ ಗೈರು

11:41 PM Feb 05, 2024 | Team Udayavani |

ಚೆನ್ನೈ: ಅಯೋಧ್ಯೆಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು ಎಂಬ ಕಾರಣ ಕ್ಕಾಗಿಯೇ ಶಂಕರಾಚಾರ್ಯರು ಆ ಕಾರ್ಯ ಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್‌ ಹೇಳಿದ್ದಾರೆ. ಈ ಮೂಲಕ “ಸನಾತನ ಧರ್ಮ’ ವಿವಾದದ ಬೆನ್ನಲ್ಲೇ ಮತ್ತೂಂದು ವಿವಾದಕ್ಕೆ ಸಿಎಂ ಸ್ಟಾಲಿನ್‌ ಪುತ್ರ ನಾಂದಿ ಹಾಡಿದ್ದಾರೆ.

Advertisement

ಚೆನ್ನೈನಲ್ಲಿ ಪಕ್ಷದ ಬೂತ್‌ ಏಜೆಂಟ್‌ಗಳ ಸಭೆಯಲ್ಲಿ ಮಾತನಾಡಿ, ಮೋದಿ ಇದ್ದರೆ, ನಾವು ಬರಲ್ಲ ಎಂದು ಹೇಳಿಯೇ ಸ್ವಾಮೀಜಿ ಗಳು ಕಾರ್ಯ ಕ್ರಮದಿಂದ ದೂರ ಉಳಿದರು. ನಾಲ್ಕು ತಿಂಗಳ ಹಿಂದೆ ನಾನು ಮಾತನಾಡಿದ್ದು ಇದನ್ನೇ. ಎಲ್ಲರೂ ಸಮಾನರು ಎಂದೇ ನಾನು ಹೇಳಿದ್ದು. ಹಾಗೆ ಹೇಳಿದ್ದಕ್ಕೆ ನನ್ನ ಮೇಲೆ ಕೇಸು ದಾಖಲಿಸಿದರು. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ.’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next