Advertisement

Gandhinagar: ಚಪ್ಪಲಿ ಬಾಯಲ್ಲಿಟ್ಟು ಥಳಿತ!

11:42 PM Nov 24, 2023 | Team Udayavani |

ಗಾಂಧಿನಗರ: ಬಾಕಿ ಉಳಿಸಿಕೊಂಡಿದ್ದ ವೇತನವನ್ನು ಕೇಳಿದ್ದಕ್ಕಾಗಿ ದಲಿತ ಉದ್ಯೋಗಿ ಯೊಬ್ಬರನ್ನು ಮನಸೋ ಇಚ್ಛೆ ಥಳಿಸಿ, ಮಾಲಕಿಯ ಚಪ್ಪಲಿಯನ್ನು ಬಾಯಲ್ಲಿ ಇಟ್ಟುಕೊಳ್ಳುವಂತೆ ಪೀಡಿಸಿರುವ ಆರೋಪ ಸಂಬಂಧ ಮಹಿಳಾ ಉದ್ಯಮಿ ಹಾಗೂ 6 ಮಂದಿ ವಿರುದ್ಧ ಗುಜರಾತ್‌ನ ಮೊರ್ಬಿ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ರಾಣಿಬಾ ಇಂಡಸ್ಟ್ರೀಸ್‌ ಪ್ರೈ.ಲಿ. ಮಾಲೀಕರಾದ ವಿಭೂತಿ ಪಟೇಲ್‌ ಅವರು ನೀಲೇಶ್‌ ದಲ್ಸಾನಿಯಾ(21) ಎಂಬ ಯುವಕ ನನ್ನು ಮಾಸಿಕ 12,000ರೂ. ವೇತನಕ್ಕೆ ಕೆಲಸಕ್ಕೆ ತೆಗೆದುಕೊಂಡಿದ್ದರು. ಆದರೆ 18 ದಿನಗಳಲ್ಲೇ ಒಪ್ಪಂದವನ್ನು ಕೊನೆಗೊಳಿಸಲಾಯಿತು. ಹೀಗಾಗಿ ಆವರೆಗಿನ 16 ದಿನಗಳ ಸಂಬಳ ನೀಡುವಂತೆ ನೀಲೇಶ್‌ ಕೇಳಿದ್ದಾರೆ. ಅದನ್ನು ಕೊಡಲು ನಿರಾಕರಿಸಿದ ವಿಭೂತಿ, ಆಕೆಯ ಅಣ್ಣ ಹಾಗೂ ಇತರೆ 5 ಮಂದಿ ಸೇರಿ ನೀಲೇಶ್‌ನನ್ನು ಥಳಿಸಿ ಆಕೆಯ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಳ್ಳುವಂತೆ ಹಿಂಸಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next