Advertisement

ಸುರತ್ಕಲ್: 6 ಗಂಟೆಗೆ ಬೀಚ್ ಗೆ ಬೀಗ!

11:04 PM Jan 07, 2021 | Team Udayavani |

ಸುರತ್ಕಲ್: ನೂತನ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಗಾಂಜಾ, ಅಮಲು ಪದಾರ್ಥ ಸೇವನೆ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಬಿಗಿ ಕ್ರಮ ಬೀಚ್ ಗಳಲ್ಲಿ ಬರುವ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದೆ.

Advertisement

ಶನಿವಾರ ರವಿವಾರ ಜನರಿಂದ ಸದಾ ಗಿಜಿಗುಡುವ ಬೀಚ್ ನಲ್ಲಿ ಇನ್ನು 6 ಗಂಟೆಯ ಬಳಿಕ ಜನ ಇರದಂತೆ ನೋಡಿಕೊಳ್ಳಿ. ಎಲ್ಲರನ್ನೂ ಬೇಗ ಕಳಿಸಬೇಕು ಎಂಬ ಆದೇಶ ಹೊರ ಬಿದ್ದಿದೆ. ಸಂಜೆಯಾದೊಡನೆ ಜನ ಬೀಚ್ ಖಾಲಿ ಮಾಡಬೇಕೆಂದು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುವ ಯೋಜಕ ಸಂಸ್ಥೆಗೆ ಪೊಲೀಸ್ ಇಲಾಖೆಯಿಂದ ಮೌಕಿಕ ಆದೇಶವಾಗಿದೆ. ಪಣಂಬೂರು, ಸುರತ್ಕಲ್ ಬೀಚ್ ನಲ್ಲೂ ಪೊಲೀಸ್ ವಾಹನಗಳು ರೌಂಡ್ಸ್ ಹೊಡೆಯುತ್ತಿದ್ದು, ಜನರನ್ನು ಹಿಂದೆ ಕಳಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

ಯಾಕೆ ಏನು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕರಾವಳಿಯಲ್ಲಿ ಪ್ರವಾಸಿಗರನ್ನು ಸೆಳೆಯುವ ಸ್ಥಳ ಬೀಚ್. ಸ್ಥಳೀಯ ಜನರ ಸಹಿತ ಪ್ರವಾಸಿಗರು 8-9 ಗಂಟೆಯವರೆಗೆ ಇರುವುದು ಸಾಮಾನ್ಯ. ಆದರೆ ಇದೀಗ 6 ಗಂಟೆಗೆ ಜನರನ್ನು ವಾಪಾಸು ಕಳಿಸಿ ಎಂಬ ಮೌಕಿಕ ಆದೇಶ ಪೊಲೀಸ್ ಇಲಾಖೆಯಿಂದ ಹೊರ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next