Advertisement

ಹೊಣೆ ತಿಳಿಸಲು ನಮ್ಮ ಕಸ ನಮ್ಮ  ಜವಾಬ್ದಾರಿ

12:10 PM Mar 26, 2017 | |

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ  “ನಮ್ಮ ಕಸ ನಮ್ಮ ಜವಾಬ್ದಾರಿ, ನಮ್ಮ ವಾರ್ಡ್‌ನ ಕಸ ವಾರ್ಡ್‌ ಜವಾಬ್ದಾರಿ’ ಸೇರಿ ಹಲವರು ಕಾರ್ಯಕ್ರಮ ಘೋಷಿಸಿದ್ದು, ಅದಕ್ಕಾಗಿ 751.70 ಕೋಟಿ ರೂ.ಮೀಸಲಿಡಲಾಗಿದೆ.

Advertisement

 ಕಸ ವಿಲೇವಾರಿಗೆ 600 ಕೋಟಿ ರೂ.ಮೀಸಲಿಡಲಾಗಿದ್ದು ಪ್ರತಿ ಮನೆಗಳಲ್ಲಿ ಕಸ ಬೇರ್ಪಡಿಸಲು ಎರಡು ಕಸದ ಬುಟ್ಟಿ ಮತ್ತು ಒಂದು ಚೀಲವನ್ನು ಪಾಲಿಕೆ ವತಿಯಿಂದಲೇ ಉಚಿತವಾಗಿ ನೀಡಲು 5 ಕೋಟಿ ರೂ. ಅನುದಾನ ನೀಡಲಾಗಿದೆ. ಮನೆಗಳಲ್ಲಿ ಉತ್ತತ್ತಿಯಾಗುವ ಹಸಿ ತ್ಯಾಜ್ಯ ವನ್ನು ಕಾಂಪೋಸ್ಟ್‌ ಆಗಿ ಪರಿವರ್ತಿ­ಸುವ ಕುರಿತು ಅರಿವು ಮೂಡಿಸಲಾ­ಗುವುದು.

ಜತೆಗೆ ಕಾಂಪೋಸ್ಟ್‌ ಸಂತೆ ಹಮ್ಮಿಕೊಳ್ಳಲು 2 ಕೋಟಿ ರೂ. ಒದಗಿಸಲಾಗಿದೆ. ವಾರ್ಡ್‌ ಮಟ್ಟದಲ್ಲಿ ಉದ್ಯಾನವನಗಳಲ್ಲಿ  ಹಾಗೂ ಇತರೆ ಸ್ಥಳಗಳಲ್ಲಿ ವಿಕೇಂದ್ರಿಕೃತ ಕಾಂಪೋಸ್ಟ್‌ ಕೇಂದ್ರಗಳನ್ನು ತೆರೆಯುವುದು. ಘನ ತ್ಯಾಜ್ಯ ವಿಂಗಡಣೆಗಾಗಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸುವುದನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. 

ವಸತಿ ಸಂಕೀರ್ಣಗಳಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್‌ ಕಡ್ಡಾಯಗೊಳಿಸಿ, ಘನತ್ಯಾಜ್ಯ ಕರದಲ್ಲಿ ವಿನಾಯಿತಿ ನೀಡಲು ಕ್ರಮಕೈಗೊಳ್ಳಲಾಗಿದೆ. ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಂಕ್‌ ವರ್ಕರ್ಗಳ ಸೇವೆಯನ್ನು ನಾಗರಿಕ­ರಿಗೆ ತರಬೇತಿ ಮತ್ತು ಅರಿವು ಮೂಡಿಸಲು ಬಳಸಿಕೊಳ್ಳಲಾಗುವುದು. 

ಕಸದ ವಿಲೇವಾರಿ ನಿಗಾಕ್ಕೆ ಮಾರ್ಷಲ್‌ಗ‌ಳು
ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರು, ಕಸ ವಿಂಗಡಿಸದೆ ನೀಡುವವರ ಮೇಲೆ ನಿಗಾ ವಹಿಸಲು ಪ್ರತಿವಾರ್ಡ್‌ಗೆ ಒಬ್ಬ ಮಾರ್ಷಲ್‌ರಂತೆ 198 ಮಾರ್ಷಲ್‌ಗ‌ಳನ್ನು ನಿಯೋಜಿಸು­ವು­ದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಮೂಲದಲ್ಲೇ ಕಸ ವಿಂಗಡನೆ ಕಡ್ಡಾಯಗೊಳಿಸಿದ್ದರೂ ಕಸ ವಿಂಗಡಿಸಿ ನೀಡದವರು,

Advertisement

ಹಸಿ/ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸದ ಪೌರ ಕಾರ್ಮಿಕರು, ನಿವೇಶನ, ಫ‌ುಟ್‌ಪಾತ್‌ನಲ್ಲಿ ಕಸ ಸುರಿಯುವವರನ್ನು ಮಾರ್ಷಲ್‌ಗ‌ಳು ಪತ್ತೆ ಹಚ್ಚಿ 500 ರೂ. ದಂಡ ವಿಧಿಸಲಿದ್ದಾರೆ. ನೈರ್ಮಲ್ಯ ಕಾಪಾಡಲು ಈ ವ್ಯವಸ್ಥೆ ಜಾರಿಗೆ ಸಜ್ಜಾಗಿರುವ ಪಾಲಿಕೆ, ನಿವೃತ್ತ ಸೈನಿಕರನ್ನು ಮಾರ್ಷಲ್‌ಗ‌ಳನ್ನಾಗಿ ನಿಯೋಜಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next