Advertisement

‘ಹೊಸ ಸವಾಲುಗಳನ್ನು ನಿಭಾಯಿಸಲು ಸಿದ್ಧರಾಗಿ’

02:52 PM Nov 01, 2017 | Team Udayavani |

ಮೂಡಬಿದಿರೆ: ವೃತ್ತಿಪರ ಛಾಯಾ ಚಿತ್ರಗ್ರಾಹಕ ಹೊಸ ಸವಾಲುಗಳನ್ನು ನಿಭಾಯಿಸಿಕೊಂಡು ಬೆಳೆಯಬೇಕು ಎಂದು ಪ್ರಭು ಹಾಸ್ಪಿಟಲ್‌ ನ ಮುಖ್ಯಸ್ಥ ಡಾ| ಕೃಷ್ಣಮೋಹನ ಪ್ರಭು ಹೇಳಿದರು. ದ.ಕ. ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಸೌತ್‌ ಕೆನರಾ ಫೂಟೋಗ್ರಾಫರ್ ಅಸೋಸಿಯೇಶನ್‌ನ ಮೂಡಬಿದಿರೆ ವಲಯದ 2017-19ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಕೆಪಿಎ ಅಧ್ಯಕ್ಷ ವಿಲ್ಸನ್‌ ಗೋನ್ಸಾಲ್ವಿಸ್‌ ಅಧ್ಯಕ್ಷತೆ ವಹಿಸಿದ್ದರು. ಪ್ರ. ಕಾರ್ಯದರ್ಶಿ ದಯಾನಂದ ಬಂಟ್ವಾಳ, ಮೂಡಬಿದಿರೆ ವಲಯದ ಗೌರವಾಧ್ಯಕ್ಷ ಭಾನುಪ್ರಕಾಶ್‌ ರಾವ್‌, ಸೌತ್‌ ಕೆನರಾ ಫೊಟೋಗ್ರಾಫರ್ ವಿವಿಧೋದ್ದೇಶ ಸಂಘದ ನಿರ್ದೇಶಕ ರಾಮ ಕೋಟ್ಯಾನ್‌ ಮುಖ್ಯ ಅತಿಥಿಗಳಾಗಿದ್ದರು.

Advertisement

ಸಮ್ಮಾನ
ಎಸ್‌ಕೆಪಿಎ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಮಣಿ ಕೋಟೆಬಾಗಿಲು, ಎಸ್‌ಕೆಪಿಎ ನಿಕಟಪೂರ್ವ ಪ್ರ. ಕಾರ್ಯದರ್ಶಿ ಮಧು ಮಂಗಳೂರು ಹಾಗೂ ಮೂಡಬಿದಿರೆಯ ಹಿರಿಯ ಪತ್ರಕರ್ತರನ್ನು ಸಮ್ಮಾನಿಸಲಾಯಿತು. ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಿತ ರತನ್‌ ಬಾರಾಡಿ ಅವರನ್ನು ಪುರಸ್ಕರಿಸಲಾಯಿತು.

ಸಂಘದ ಸದಸ್ಯ ಇರುವೈಲ್‌ನ ಉದಯ ಭಟ್ಟರ ಪುತ್ರ, ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಶ್ರೇಯಸ್‌
ಭಟ್‌ಗೆ ಪ್ರೋತ್ಸಾಹ ಧನ, ಎಂ.ಎಸ್‌. ವಸಂತ ಅವರ ಪುತ್ರಿಯ ವಿವಾಹದ ಬಗ್ಗೆ ಸಹಾಯಧನ ವಿತರಿಸಲಾಯಿತು.
ನೂತನ ಅಧ್ಯಕ್ಷ ರವಿ ಕೋಟ್ಯಾನ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿತಿನ್‌ ಬೆಳುವಾಯಿ ವರದಿ ವಾಚಿಸಿ
ವಂದಿಸಿದರು. ಕೋಶಾಧಿಕಾರಿ ಜಗದೀಶ್‌ ಕೆ. ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ವಿಲ್ಫ್ರೆಡ್ ಮೆಂಡೋನ್ಸಾ ಮತ್ತು ಇಕ್ಬಾಲ್‌ ನಿರೂಪಿಸಿದರು. ‘ಮಜಾಭಾರತ’ ಖ್ಯಾತಿಯ ಆರಾಧನಾ ಭಟ್‌ ನಿಡ್ಡೋಡಿ ಮತ್ತು ಬಳಗದವರಿಂದ ನಗೆ ಹಬ್ಬ ಕಾರ್ಯಕ್ರಮ ಮಣಿ ಕೋಟೆಬಾಗಿಲು ನಿರ್ವಹಣೆಯೊಂದಿಗೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next