Advertisement

10 ಗಂಟೆಗೆ ಕಚೇರಿಯಲ್ಲಿರಿ…: ಸಚಿವಾಲಯದ ನೌಕರರಿಗೆ ಖಡಕ್ ಸೂಚನೆ

06:51 PM Jul 25, 2022 | Team Udayavani |

ಬೆಂಗಳೂರು: ನಿಗದಿತ ಸಮಯದ ವೇಳೆ ಕಚೇರಿಯಲ್ಲಿರಬೇಕು, ಕಡ್ಡಾಯ ಕರ್ತವ್ಯಪಾಲನೆ ಮಾಡಬೇಕು ಎಂದು ಸಚಿವಾಲಯದ ನೌಕರರಿಗೆ ಖಡಕ್ ಸೂಚನೆ ನೀಡಲಾಗಿದೆ.

Advertisement

ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿರಬೇಕು, ಸಮಯ ಪ್ರಜ್ಙೆ,ಕಾರ್ಯನಿಷ್ಠೆ ಕೊರತೆ ಯಾಗಬಾರದು, ದೂರದೂರುಗಳಿಂದ ಜನ ಸಮಸ್ಯೆ ಹೊತ್ತು ತರುತ್ತಾರೆ. ಆದರೆ, ಆ ವೇಳೆ ಅಧಿಕಾರಿ,ಸಿಬ್ಬಂದಿ ಇಲ್ಲವೆಂಬ ಮಾಹಿತಿಯಿದೆ. ನಿಗದಿತ ಕಾಲಾವಧಿಗಿಂತ ವಿಳಂಬವಾಗಿ ಹಾಜರಾಗುವುದು, ಕಚೇರಿ ಅವಧಿಯಲ್ಲಿ ಸ್ಥಳದಲ್ಲಿಲ್ಲದಿರುವುದು ಕಂಡು ಬಂದಿದೆ. ಇನ್ನು ಮುಂದೆ ಕಡ್ಡಾಯವಾಗಿ ಕಚೇರಿಯಲ್ಲಿರಬೇಕು,ಬೇರೆಡೆ ತೆರಳಬೇಕಾದರೆ ಅನುಮತಿ ಕಡ್ಡಾಯ, ಮೇಲ್ವಿಚಾರಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಇಲ್ಲವಾದರೆ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸರಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಪದೇ ಪದೇ ಸುತ್ತೋಲೆ ಹೊರಡಿಸಲಾಗಿದೆ, ಪದೇ ಪದೇ ಆರೋಪಗಳು ಕೇಳಿಬಂದಿವೆ, ಹೀಗಾಗಿ ಕಡ್ಡಾಯ ಕರ್ತವ್ಯ ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next