Advertisement

ಪ್ರಾಣಿ ಬಲಿಯಾಗದಂತೆ ಎಚ್ಚರ ವಹಿಸಿ: ಸ್ವಾಮೀಜಿ

05:29 PM Apr 13, 2022 | Team Udayavani |

ಗುಳೇದಗುಡ್ಡ: ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿ ಮಂಗಳಾದೇವಿ ಜಾತ್ರೆ ನಡೆಯಲಿದ್ದು, ಸದರಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆಯಬಾರದೆಂದು ಆಗ್ರಹಿಸಿ, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬಸವಜ್ಞಾನ ಪೀಠದ ಡಾ| ದಯಾನಂದ ಸ್ವಾಮೀಜಿ ಮನವಿ ಮಾಡಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳತಕ್ಕೆ ಮನವಿ ಸಲ್ಲಿಸಿ, ಮಂಗಳಗುಡ್ಡ ಜಾತ್ರೆಯಲ್ಲಿ ಆಡು ಕುರಿ, ಕೋಳಿ, ಕೋಣ ಮುಂತಾದ ಯಾವುದೇ ಪ್ರಾಣಿಗಳ ಬಲಿಯಾಗದಂತೆ ಮುಂಜಾಗ್ರತ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರಾಣಿ ಬಲಿ ಕೊಡುವ ಪದ್ಧತಿಯು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಹಾಗೂ ಶಿಕ್ಷಾರ್ಹವಾಗಿದೆ. ಕಾರಣ ಯಾವುದೇ ರೀತಿಯ ಪ್ರಾಣಿ ಬಲಿ ನಡೆಸಲು ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಮಂಗಳಗುಡ್ಡ ಗ್ರಾಮದಲ್ಲಿ ನಡೆಯುವ ಮಂಗಳಾದೇವಿ ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯವಾಗಿದೆ. ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುವುದು ಕರ್ನಾಟಕ ಬಲಿ ಕಾಯ್ದೆ ನಿಷೇಧ ಪ್ರಕಾರ ಅಪರಾಧ. ದೇವರ ಹೆಸರಿನಲ್ಲಿ ಹರಕೆಯ ಹೆಸರಲ್ಲಿ ಪ್ರಾಣಿ ಬಲಿ ಸರಿಯಲ್ಲ.

ಎಮ್ಮೆ ಕೋಣ ಕುರಿ ಸೇರಿದಂತೆ ಇನ್ನಿತರ ಪ್ರಾಣಿ ಬಲಿ ಕೊಟ್ಟಲ್ಲಿ ದಂಡ ಶಿಕ್ಷೆಯಿದೆ. ಮಂಗಳಗುಡ್ಡ ಗ್ರಾಮದಲ್ಲಿ ಮಂಗಳಾದೇವಿಯ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಿಷೇಧಿಸಿ  ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಪ್ರಾಣಿ ಬಲಿ ನಡೆಯಬಾರದು. ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು. ಪ್ರಾಣಿ ಬಲಿ ನಡೆದರೆ ದೇವಸ್ಥಾನದ ಆಡಳಿತ ಮಂಡಳಿಯೆ ಹೊಣೆ ಎಂದು ಆದೇಶವಿದ್ದು, ಕಾನೂನು ಚೌಕಟ್ಟಿನಲ್ಲಿ ದೇವರ ಆಚರಣೆಯಾಗಬೇಕು.

ಪ್ರಾಣಿ ಬಲಿನಡೆಯಬಾರದೆಂದು ನಾನು ಮನವಿ ನೀಡುತ್ತಿದ್ದೇನೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬಸವಜ್ಞಾನ ಪೀಠದ ಡಾ| ದಯಾನಂದ ಸ್ವಾಮೀಜಿ ಮನವಿ ಮಾಡಿದರು. ಸುನಂದಾ ದೇವಿ ಇತರರು ಇದ್ದರು.

Advertisement

ಪ್ರಾಣಿ ಬಲಿಗೆ ತಡೆ: ಗ್ರಾಮದಲ್ಲಿ ವಾಸ್ತವ್ಯ

ಮಂಗಳಗುಡ್ಡ ಗ್ರಾಮದಲ್ಲಿ ಮಂಗಳಾದೇವಿ ಜಾತ್ರೆ ನಡೆಯಲಿದ್ದು, ಸದರಿ ಜಾತ್ರೆಯಲ್ಲಿ ಪ್ರಾಣಿ ಬಲಿ ಮಾಡಬಾರದೆಂದು ಜಿಲ್ಲಾ ಧಿಕಾರಿಗಳು ಸಹ ನಿಷೇಧ ಹೇರಿದ್ದು, ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈೂಂಡಿದೆ. ಅಲ್ಲದೇ ಮಂಗಳವಾರದಿಂದಲೇ ಪೊಲೀಸ್‌ ಇಲಾಖೆಯೊಂದಿಗೆ ಅಲ್ಲಿಯೇ ವಾಸ್ತವ್ಯ ಹೂಡುತ್ತೇವೆ ಎಂದು ತಹಶೀಲ್ದಾರ್‌ ಎಸ್‌.ಎಫ್‌.ಬೊಮ್ಮಣ್ಣವರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಧಿಕಾರಿಗಳು ಪ್ರಾಣಿ ಬಲಿ ನಿಷೇಧ ಮಾಡಿದ್ದು, ನಾವು ಹಾಗೂ ಪೊಲೀಸ್‌ ಇಲಾಖೆ ಕೂಡಾ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದೇವೆ. ಪ್ರಾಣಿ ಬಲಿಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಪಿಎಸ್‌ಐ ಐ.ಎಂ.ದುಂಡಸಿ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಸಭೆ ನಡೆಸಿದ್ದು, ಗ್ರಾಮಸ್ಥರಿಗೂ ಪ್ರಾಣಿ ಬಲಿಮಾಡಬಾರದೆಂದು ತಿಳಿ ಹೇಳಿದ್ದೇವೆ. ಚಿಮ್ಮಲಗಿ ಹಾಗೂ ಕಾಟಾಪುರ ಹತ್ತಿರ ಚೆಕ್‌ಪೋಸ್ಟ್‌ ಹಾಕಲಾಗುವುದು ಎಂದರು. ಕಂದಾಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next