Advertisement

ಡಿಸೆಂಬರ್‌ನಲ್ಲಿ ರಣಜಿಗೆ ಬಿಸಿಸಿಐ ಯೋಜನೆ: ಇರಾನಿ, ದೇವಧರ್‌, ದುಲೀಪ್‌ ಟ್ರೋಫಿ ಅನುಮಾನ!

08:43 AM Apr 18, 2021 | Team Udayavani |

ನವದೆಹಲಿ: 2021-22ರ ದೇಶೀಯ ಕ್ರಿಕೆಟ್‌ ಸರಣಿಯನ್ನು ಸೆಪ್ಟೆಂಬರ್‌ ತಿಂಗಳಿಂದ ಸೈಯದ್‌ ಮುಷ್ತಾಕ್‌ ಅಲಿ ಟಿ20 ಸರಣಿಯೊಂದಿಗೆ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಕೊರೊನಾ ಕಾರಣದಿಂದ ಕಳೆದ ಸಲ ಕೈಬಿಡಲಾಗಿದ್ದ ಪ್ರತಿಷ್ಠಿತ ರಣಜಿ ಟ್ರೋಫಿ ಪಂದ್ಯಾವಳಿಗೆ ಡಿಸೆಂಬರ್‌ನಿಂದ ಮೊದಲ್ಗೊಂಡು 3 ತಿಂಗಳ ಅವಧಿಯನ್ನು ಮೀಸಲಿರಿಸಿದೆ.

Advertisement

ಶುಕ್ರವಾರದ ಬಿಸಿಸಿಐ ಉನ್ನತ ಸಭೆಯಲ್ಲಿ ದೇಶೀಯ ಕ್ರಿಕೆಟ್‌ ಪಂದ್ಯಾವಳಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಆದರೆ ಇದರಲ್ಲಿ ಇರಾನಿ, ದೇವಧರ್‌, ದುಲೀಪ್‌ ಟ್ರೋಫಿ, 5 ವನಿತಾ ಸರಣಿಗಳ ಯಾವುದೇ ಪ್ರಸ್ತಾವವಿಲ್ಲ.

ವನಿತೆಯರಿಗೆ ರಾಷ್ಟ್ರೀಯ ಏಕದಿನ ಕ್ರಿಕೆಟ್‌ ಸರಣಿಯನ್ನು ಮೀಸಲಿರಿಸಲಾಗಿದೆ. ಇದರೊಂದಿಗೆ ಪುರುಷರ ಹಾಗೂ ವನಿತೆಯರ 23 ಮತ್ತು 19 ವಯೋಮಿತಿ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next