Advertisement

ಭಾರತ ಕ್ರಿಕೆಟ್‌ ತಂಡಕ್ಕೆ ಎಸ್‌.ಸುಬ್ರಹ್ಮಣ್ಯನ್‌ ಮ್ಯಾನೇಜರ್‌

07:55 AM Jul 30, 2017 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡಕ್ಕೆ ತಮಿಳುನಾಡು ಕ್ರಿಕೆಟ್‌ ತಂಡದ ಮಾಜಿ ನಾಯಕ ಸುನಿಲ್‌ ಸುಬ್ರಹ್ಮಣ್ಯನ್‌ ಅವರು ಆಡಳಿತ ಮ್ಯಾನೇಜರ್‌ ಆಗಿ ಆಯ್ಕೆಯಾಗಲಿದ್ದಾರೆ. ಹೀಗೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

Advertisement

ಒಂದು ವರ್ಷದ ಒಪ್ಪಂದದ ಅವಧಿ ಇದಾಗಿದೆ. ಲಂಕಾ ವಿರುದ್ಧ ಕೊಲಂಬೊದಲ್ಲಿ ಆ.3ರಿಂದ ಎರಡನೇ ಟೆಸ್ಟ್‌ ಆರಂಭವಾಗಲಿದೆ. ಈ ವೇಳೆ ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸ್ವತಃ ಈ ವಿಷಯವನ್ನು ಬಿಸಿಸಿಐ ತಿಳಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೊಹ್ಲಿ- ಕುಂಬ್ಳೆ ಕಿತ್ತಾಟದಲ್ಲಿ ಭಾರತ ತಂಡದ ಮ್ಯಾನೇಜರ್‌ ಹುದ್ದೆಯನ್ನು ಕಪಿಲ್‌ ಮಲ್ಹೋತ್ರಾ ಕಳೆದುಕೊಂಡಿದ್ದರು. ಆ ಬಳಿಕ ಬಿಸಿಸಿಐ ಹೊಸ ಮ್ಯಾನೇಜರ್‌ ಅರ್ಜಿ ಕರೆದಿತ್ತು.  12 ಮಂದಿ ಮ್ಯಾನೇಜರ್‌ ಹುದ್ದೆ ಸಂದರ್ಶನವನ್ನು ಎದುರಿಸಿದ್ದರು.ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-0 ಮುನ್ನಡೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next