Advertisement

ಬಿ.ಸಿ.ರೋಡ್‌ : ಅಣಬೆ ಬೇಸಾಯ ಪ್ರಾತ್ಯಕ್ಷಿಕೆ

11:09 AM Feb 25, 2017 | Team Udayavani |

ಬಂಟ್ವಾಳ :  ಬಿ.ಸಿ.ರೋಡ್‌  ಸ್ತ್ರೀಶಕ್ತಿ ಭವನದಲ್ಲಿ  ರೈತ ಮಹಿಳೆಯರಿಗೆ ಅಣಬೆ ಬೇಸಾಯ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮ ನಡೆಯಿತು.

Advertisement

ತೋಟಗಾರಿಕೆ ಇಲಾಖೆ , ಜಿ.ಪಂ. ಬಂಟ್ವಾಳ. ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಬಂಟ್ವಾಳ ಹಾಗೂ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್‌ ಸೊಸೆ„ಟಿ ಬಂಟ್ವಾಳ   ಇದರ ಆಶ್ರಯದಲ್ಲಿ 2016-17ನೇ ಸಾಲಿನ ತಾ.ಪಂ.ಯೋಜನೆಯಡಿ ತರಬೇತಿ ಹಮ್ಮಿಕೊಳ್ಳಲಾಗಿತ್ತು. 

ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  ಮಹಿಳೆಯರಿಗೆ ಅರ್ಥಿಕ ಶಕ್ತಿ ತುಂಬಿದಾಗ ಸಶಕ್ತೀಕರಣ  ಸಾಧ್ಯ ಎನ್ನುವ ನಿಟ್ಟಿನಲ್ಲಿ ಸರಕಾರ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ ಬಿ.ಎಂ. ವಹಿಸಿದ್ದರು. ವೇದಿಕೆಯಲ್ಲಿ ಬಂಟ್ವಾಳ ಸಹಾಯಕ ತೋಟಗಾರಿಕೆ  ನಿರ್ದೇಶಕ ದಿನೇಶ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್‌ ಮಿರಾಂದಾ, ತಾಲೂಕು ಸ್ತ್ರೀ ಶಕ್ತಿ ಬ್ಲಾಕ್‌ ಸೊಸೈಟಿ ಕಾರ್ಯದರ್ಶಿ ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ತಾ.ಪಂ.ಸದಸ್ಯೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ಸ್ತ್ರೀಶಕ್ತಿ ಬ್ಲಾಕ್‌ ಸೊಸೆ„ಟಿ ಅಧ್ಯಕ್ಷೆ ಶರತ್‌ ಶೆಟ್ಟಿ ಮತ್ತು ಸಂಪನ್ಮೂಲ ವ್ಯಕ್ತಿ ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಪಾಂಡುರಂಗ ಕೆ. ಉಪಸ್ಥಿತರಿದ್ದರು.

ಸಹಾಯಕ ತೋಟಗಾರಿಕೆ  ಇಲಾಖೆಯ ಅಧಿಕಾರಿ ಬಾಲಕೃಷ್ಣ ಸ್ವಾಗತಿಸಿ, ಮೇಲ್ವಿಚಾರಕಿ  ಸಿಂಧೂ ಕೆ.ವಿ.  ವಂದಿಸಿದರು. ಮೇಲ್ವಿಚಾರಕಿ  ಸವಿತಾ ನವೀನ್‌ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next