Advertisement

ಕಚ್ಚುವ ನಾಯಿಗಳಿಗಾಗಿ BBMP ಕಾರ್ಯಾಚರಣೆ;10 ಬಲೆಗೆ 

10:21 AM Aug 17, 2017 | |

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದ್ದು ನಾಯಿಗಳನ್ನು ಹಿಡಿಯಲು ಗುರುವಾರ ಸಿಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. 

Advertisement

ಎಂ.ಎಸ್‌.ರಾಮಯ್ಯ ಆಸ್ಪತ್ರೆ ರಸ್ತೆಯಲ್ಲಿ ಹತ್ತಾರು ಮಂದಿಗೆ ಕಚ್ಚಿದ್ದ ನಾಯಿಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈಗಾಗಲೇ 10ಕ್ಕೂ ಹೆಚ್ಚು ನಾಯಿಗಳು ಬಲೆಗೆ ಬಿದ್ದಿವೆ. 

 ಎಂ.ಎಸ್‌. ರಾಮಯ್ಯ ಆಸ್ಪತ್ರೆ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ಹಲವೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜೆಪಿನಗರ, ಮೆಜೆಸ್ಟಿಕ್‌, ಶಿವಾಜಿನಗರ ಸೇರಿದಂತೆ ಕೆಲ ಕಡೆಗಳಲ್ಲಿ ನಾಯಿ ಕಡಿದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. 

ಕಳೆದ ಮಂಗಳವಾರ ಗುಲ್ಬರ್ಗ ಮೂಲದ ಜ್ಯೋತಿ ಎಂಬುವವರು ಮನೆ ಕೆಲಸ ಮುಗಿಸಿಕೊಂಡು ಸಹೋದರಿಯೊಂದಿಗೆ ಬರುವ ವೇಳೆ ಸುಮಾರು ಹತ್ತು ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಜ್ಯೋತಿಯವರ ಕಾಲಿಗೆ ಗಾಯಗಳಾಗಿವೆ.ಬುಧವಾರ ಓರ್ವ ಯುವಕ ಹಾಗೂ ವೃದ್ಧ ಸೇರಿದಂತೆ ಹಲವು ಮಂದಿಯ ಮೇಲೆ ದಾಳಿ ನಡೆಸಿವೆ.

Advertisement

Udayavani is now on Telegram. Click here to join our channel and stay updated with the latest news.

Next