Advertisement

BBK11: ಬಿಗ್ ಬಾಸ್ ಮನೆಗೆ ತಿಳಿಯಿತು ಸುದೀಪ್ ಮಾತೃ ವಿಯೋಗದ ಸುದ್ದಿ

09:33 PM Oct 27, 2024 | Team Udayavani |

 ಬೆಂಗಳೂರು: ಬಿಗ್ ಬಾಸ್ (BBK11)ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಯಾಕೆ ಭಾಗಿಯಾಗಿಲ್ಲ ಎನ್ನುವುದರ ಹಿಂದಿನ ಕಾರಣ ಬಿಗ್ ಬಾಸ್ ಮನೆಗೆ ಗೊತ್ತಾಗಿದೆ. ಸುದೀಪ್ ತಾಯಿ ಸರೋಜ ಸಂಜೀವ್ ನಿಧನ ಹೊಂದಿರುವ ನೋವಿನ ಸುದ್ದಿಯನ್ನು ಬಿಗ್ ಬಾಸ್  ಸ್ಪರ್ಧಿಗಳಿಗೆ ಯೋಗರಾಜ್ ಭಟ್ ತಿಳಿಸಿದ್ದಾರೆ.

Advertisement

ಸುದೀಪ್ ತಾಯಿ ನಿಧನದ ಸುದ್ದಿಯನ್ನು ಬಿಗ್ ಬಾಸ್ ಮನೆಗೆ ತಿಳಿಸಿದ ಯೋಗರಾಜ್ ಭಟ್, ”ಎಷ್ಟೇ ಕಷ್ಟ ಬಂದರೂ ಜವಾಬ್ದಾರಿ ಬಿಡದೆ ಸುದೀಪ್ ಅವರು ಶೋ ನಡೆಸಿಕೊಟ್ಟಿದ್ದಾರೆ” ಎಂದು ದುಃಖದ ವಿಚಾರ ಹಂಚಿಕೊಂಡಿದ್ದಾರೆ.

”ಹೋಗಬೇಕು ಹೋಗಬೇಕು ಅಂಥ ಇದ್ರು, ಕಾರ್ಯಕ್ರಮವನ್ನು ಮುಗಿಸಿಯೇ ಅವರು ಮನೆಗೆ ಹೋಗಿ, ಆಸ್ಪತ್ರೆಗೆ ಹೋಗಿದ್ದರು. ಆದರೆ ಅಷ್ಟೋತ್ತಿಗೆ ಅವರು ಈ ಜಗತ್ತಿನಲ್ಲಿ ಇರಲಿಲ್ಲ..” ಎಂದಿದ್ದಾರೆ. ಈ ಮಾತನ್ನು ಕೇಳಿದ ಸ್ಪರ್ಧಿಗಳೆಲ್ಲ ಕಣ್ಣೀರಿಟ್ಟಿದ್ದಾರೆ. ಎಲ್ಲರೂ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next