Advertisement

BBK11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದು ಜಗದೀಶ್

11:07 PM Oct 02, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada) ದ ಆಟ ರಂಗೇರಿದೆ. ಸ್ಪರ್ಧಿಗಳ‌ ನಡುವೆ ರಿಯಲ್ ಗೇಮ್ ಶುರುವಾಗಿದೆ.

Advertisement

ಎರಡು ದಿನ ಸ್ನೇಹಿತರಂತಿದ್ದ ಸ್ಪರ್ಧಿಗಳ ನಡುವೆಯೂ ಕಿತ್ತಾಟ ಶುರುವಾಗಿದೆ. ವಕೀಲ ಜಗದೀಶ್ ಅವರು ಸ್ವರ್ಗದ ನಿವಾಸಿಯಾಗಿದ್ದರೂ ನರಕದ‌ ನಿವಾಸಿಗಳ ಜತೆ ಆತ್ಮೀಯವಾಗಿದ್ದಾರೆ.

ಜಗದೀಶ್ ನರಕ ನಿವಾಸಿಗಳಿಗೆ ಕದ್ದುಮುಚ್ಚಿ ಆಹಾರವನ್ನು ನೀಡಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಮನೆಯ ಆಹಾರ ಸಾಮಾಗ್ರಿಗಳನ್ನು ಕಿತ್ತುಕೊಂಡಿದ್ದಾರೆ.

ಟಾಸ್ಕ್ ವೊಂದನ್ನು ಸ್ವರ್ಗದ ನಿವಾಸಿಗಳಿಗೆ ನೀಡಿದ್ದು, ಟಾಸ್ಕ್ ವೇಳೆ ಜಗದೀಶ್ ಅವರ ಮೈ ತಾಗಿ ಯಮುನಾ ಕೆಳಗೆ ಬಿದ್ದಿದ್ದಾರೆ. ಇದಕ್ಕೆ ಟಾಸ್ಕ್ ಉಸ್ತುವಾರಿ ವಹಿಸಿದ್ದ ಧನರಾಜದ ಅವರು ಜಗದೀಶ್ ಅವರನ್ನು ಗೇಮ್ ನಿಂದ ಹೊರ ಹಾಕಿದ್ದಾರೆ.

ಇದಕ್ಕೆ ಜಗದೀಶ್ ಅವರು ನಾನು ರೆಫ್ರಿಯನ್ನು ನಂಬಲ್ಲ. We Want Justice ಎಂದು ಕೂಗಿದ್ದಾರೆ. ಇದಾದ ಬಳಿಕ ಧನರಾಜ್ ಅವರು ‌ಕನ್ಫೆಷನ್ ರೂಮ್ ಗೆ ಕಣ್ಣೀರು ಹಾಕಿದ್ದಾರೆ. ಬಿಗ್ ಧನರಾಜ್ ಅವರಿಗೆ ಧೈರ್ಯ ತುಂಬಿ ಟಾಸ್ಕ್ ಮುಂದುವರೆಸುವಂತೆ ಹೇಳಿದ್ದಾರೆ.

Advertisement

ಧನರಾಜ್ ಹಾಗೂ ಜಗದೀಶ್ ಅವರ ನಡುವೆ ಮಾತಿನ ಚಕಮಕಿ ನಡೆದು ತಾರರಕ್ಕೇರಿದ ಪ್ರಸಂಗ ನಡೆಯಿತು. ಉಗ್ರಂ ಮಂಜು ಅವರು ತಕ್ಕಡಿ ಭಾಗ್ಯ ಟಾಸ್ಕ್ ನಲ್ಲಿ ಗೆದ್ದು ನಾಮಿನೇಟ್ ನಿಂದ ಪಾರಾಗಿದ್ದಾರೆ.

ಜಗದೀಶ್ ಅವರು ಮಾನಸ ಅವರಿಗೆ ಯಾವ ಸೀಮೆಯ ಹೆಂಗಸು ಇವಳು ಎಂದು ಹೇಳಿದ್ದು ಮನೆಯ ಎಲ್ಲಾ ಸ್ಪರ್ಧಿಗಳು ಜಗದೀಶ್ ಅವರ ಮೇಲೆ ಗರಂ ಆಗುವ ಪ್ರಸಂಗ ನಡೆಯಿತು.

ನಾನು ಆಚೆ ಹೋಗಲಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದು ಜಗದೀಶ್ ಕ್ಯಾಮರಾ ಮುಂದೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next