Advertisement

“ನನ್ನ ಮಾತು ಕೇಳಿ ಬಂದ್ರೆ ನೀನು ಇವತ್ತಿಗೂ ರಾಣಿಯೇ..” ಮದುವೆ ಬಗ್ಗೆ ಮೌನ ಮುರಿದ ವರ್ತೂರು

09:34 AM Nov 30, 2023 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಇಬ್ಬರು ಹೊಸ ವೈಲ್ಡ್ ಕಾರ್ಡ್‌ ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ʼಬಿಗ್‌ ಬಾಸ್‌ʼ ಕಪ್‌ ಗೆಲ್ಲುವ ಅಸಲಿ ಆಟ ಶುರುವಾಗಿದೆ.

Advertisement

ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿ ಜೈಲಿಗೆ ಹೋಗಿ ಬಂದ ಬಳಿಕ ಬಿಗ್‌ ಬಾಸ್‌ ಮನೆಯೊಳಗೆ ಅಷ್ಟಾಗಿ ಸುದ್ದಿಯಲ್ಲಿ ಇಲ್ಲದಿದ್ರೂ ಮನೆಯ ಹೊರಗೆ ಸುದ್ದಿಯಲ್ಲಿದ್ದಾರೆ. ಹುಲಿ ಉಗುರು ಬಳಿಕ ಅವರ ಮದುವೆಯ ವಿಚಾರ ಹೊರಗಡೆ ಚರ್ಚೆ ಆಗಿದೆ.

ವರ್ತೂರು ಸಂತೋಷ್‌ ಅವರು ಮದುವೆ ಆಗಿದ್ದಾರೆ. ಆದರೂ ಅವರು ಮದುವೆ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಮದುವೆ ಆಗಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದಲ್ಲದೆ ಅವರು ಹೆಣ್ಣು ಪೀಡುಕ, ಮಾದಕ ವ್ಯಸನಿ, ಪತ್ನಿ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂದು ವರ್ತೂರು ಸಂತೋಷ್‌ ಅವರ ಕೆಲ ಸಂಬಂಧಿಗಳು ಆರೋಪಿಸಿದ್ದಾರೆ.

ಇದೀಗ ಈ ಬಗ್ಗೆ ವರ್ತೂರು ಮೌನ ಮುರಿದಿದ್ದಾರೆ. ಚಟುವಟಿಕೆಯೊಂದರಲ್ಲಿ ತನ್ನ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.

“ದೊಡ್ಡಪ್ಪ ನಾನು ಮೊದಲೇ ಹೇಳಿದ್ದೆ ನೀನು ಹೋಗು ತಾಳಿ ಕಟ್ಟು ಅಂತ ಹೇಳಿದ್ರೆ ನಾನು ಕಟ್ಟುತ್ತೇನೆ.  ನಾನು ಮಾತು ಕೊಟ್ಟು ಒಪ್ಪಿಕೊಂಡು ಬಿಟ್ಟೆ. ಮುಂದೆ ಇದು ಆಗ್ತಾ ಆಗ್ತಾ ನನ್ನಮ್ಮನ ಕಡೆಗಣಿಸಲು ಶುರು ಮಾಡಿದ್ರು. ನಾನು ಸಂಪಾದನೆ ಮಾಡಿರುವ ಜನ ಅವರನೆಲ್ಲ ತೊರೆದು ಇವರ ಹಿಂದೆ ಹೋಗೋಕೆ ಅದು ಸಾಧ್ಯವಿಲ್ಲ. ಹೋಗ್ತೀನಿ ಅವ್ರ ಮನೆಗೆ ಹತ್ರ. ನಾನು ಮಾತು ಪ್ರಕಾರ ಬಂದ್ರೆ ನೀನು ರಾಣಿ ಇವತ್ತಿಗೂ. ಬಾ ಅಂಥ ಕರಿತೀನಿ. ಫಸ್ಟ್‌ ನನ್ನ ಗೇಟ್‌ ಯಿಂದ ಆಚೆ ಹೋಗು ಅಂದ. ಆವತ್ತೇ ಮಾತು ಕೊಟಿದ್ದೀನಿ. ಇವತ್ತು ನಾನು ಆ ಮಾತಿಗೆ ನಿಂತಿದ್ದೇನೆ” ಎಂದರು.

Advertisement

ಇಂದು ರಾತ್ರಿ(ಗುರುವಾರ, ನ.30 ರಂದು) ಪೂರ್ತಿ ಕಾರ್ಯಕ್ರಮ ಪ್ರಸಾರ ಆಗಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next